
ಪ್ರಜಾವಾಣಿ ವಾರ್ತೆಮುದ್ದೇಬಿಹಾಳ : ಅಯೋಧ್ಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರು, ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಏ.7ರಂದು ಸಂಜೆ 6 ಗಂಟೆಗೆ ಪುರಪ್ರವೇಶ ಮಾಡಲಿದ್ದಾರೆ.
ಅಂದು ಸಂಜೆ 6 ಗಂಟೆಗೆ ಶ್ರೀಗಳಿಗೆ ಸ್ವಾಗತ, ಶ್ರೀಗಳಿಂದ ಅಮೃತೋಪದೇಶ ನಡೆಯಲಿದೆ. ಏ.8ರಂದು ಬೆಳಗ್ಗೆ 8ಕ್ಕೆ ರಾಘವೇಂದ್ರ ಮಠದಲ್ಲಿ ಶ್ರೀಗಳ ಪಾದಪೂಜೆ, 10.30ಕ್ಕೆ ಚಿದಂಬರೇಶ್ವರ ದೇವಸ್ಥಾನ ವೀಕ್ಷಣೆ, 11.30ಕ್ಕೆ ಶ್ರೀಗಳಿಂದ ಸಂಸ್ಥಾನ ಪೂಜೆ, 1.30ಕ್ಕೆ ತೀರ್ಥ ಪ್ರಸಾದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.