ADVERTISEMENT

ಬಣಜಿಗ ಸಮಾಜದಿಂದ ಉದ್ದೇಶ ಪೂರ್ವಕ ಪ್ರತಿಭಟನೆ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 15:24 IST
Last Updated 1 ನವೆಂಬರ್ 2022, 15:24 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ:ಬಣಜಿಗ ಸಮುದಾಯಕ್ಕೆ ನಾನು ಯಾವುದೇ ಅವಮಾನ ಮಾಡಿಲ್ಲ. ಕೆಲ ಮಂದಿ ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂಗಲ್ಲಾ ಪ್ರತಿಭಟನೆ ಮಾಡಿಕೊಳ್ಳುತ್ತಾ ಹೋದರೆ ಮುಂದಿನ ದಿನಗಳಲ್ಲಿ ಅವರ ಸಮಾಜದ ಜನಪ್ರತಿನಿಧಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದರ ಪರಿಣಾಮ ಅವರ ಸಮಾಜದ ಮಹಾನಾಯಕ ಔಟ್‌ ಆದರೂ ಅಚ್ಚರಿ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿಬಿಜೆಪಿ ಸೋಲಿಸಬೇಕು, ಯತ್ನಾಳ ಮುಗಿಸಬೇಕು ಎಂದು ಕಾಂಗ್ರೆಸ್‌, ಬಿಜೆಪಿಯಲ್ಲಿರುವ ಕೆಲಕಳ್ಳರ ಗ್ಯಾಂಗ್‌ ಮುಧೋಳ, ಬೆಂಗಳೂರಿನಿಂದ ನನ್ನ ವಿರೋಧಿಗಳಿಗೆ ಸಹಾಯ ಹಸ್ತ ನೀಡಿದ್ದರು. ಆದರೆ, ವಿಜಯಪುರ ಜನ ಹುಚ್ಚರಿಲ್ಲ. ತಕ್ಕ ಉತ್ತರ ನೀಡಿದ್ದಾರೆ. ಇನ್ನಾದರೂ ಬುದ್ದಿ ಕಲಿತು ನಿವೃತ್ತಿ ಜೀವನ ಮನೆಯಲ್ಲಿ ಅರಾಂ ಆಗಿ ಮಾಡಲಿ ಎಂದು ಯತ್ನಾಳ ಟಾಂಗ್‌ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.