ಕೊಲ್ಹಾರ: ತಾಲ್ಲೂಕಿನ ಮಸೂತಿ ಗ್ರಾಮದ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ನವೆಂಬರ್ 8, 9 ಮತ್ತು 10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅ.29ರಂದು ಜಗದೀಶ್ವರ ಹಿರೇಮಠದ ಬಸವಲಿಂಗ ಸ್ವಾಮೀಜಿ ಪುರಾಣ ಪ್ರಾರಂಭೋತ್ಸವ ಜರುಗಲಿದೆ. ನ.8ರಂದು ಸಂಜೆ 4 ಗಂಟೆಗೆ ‘ಸುವರ್ಣ ಪ್ರಭೆ’ ಅಭಿನಂದನಾ ಗ್ರಂಥ ಮತ್ತು ‘ಜಗದೊಡೆಯ ಶ್ರೀ ಜಗದೀಶ್ವರ ಪ್ರಭು’ ಧ್ವನಿ ಸುರುಳಿ ಬಿಡುಗಡೆ, ನಂತರ ಶ್ರೀಮಠದಿಂದ ಡಾ.ಸಂಗನಬಸವ ಸ್ವಾಮೀಜಿ ತುಲಾಭಾರ ಕಾರ್ಯಕ್ರಮ ಜರುಗುಲಿದೆ.
ನ. 9ರಂದು ಬೆಳಿಗ್ಗೆ 10 ಗಂಟೆಗೆ ಉಜ್ಜಯಿನಿ ಹಾಗೂ ಶ್ರೀಶೈಲ ಜಗದ್ಗುರುಗಳ ಭವ್ಯ ಮೆರವಣಿಗೆ, ಮಧ್ಯಾಹ್ನ ಒಂದು ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಜನ್ಮ ಸುವರ್ಣ ಮಹೋತ್ಸವ ಹಾಗೂ ‘ಜ್ಞಾನ ದಾಸೋಹಿ’ ಬಂಥನಾಳ ಸಂಗನಬಸವ ಶಿವಯೋಗಿ ಪುರಾಣ ಗ್ರಂಥ ಬಿಡುಗಡೆ, ಸಂಜೆ 7ಗಂಟೆಗೆ ಕಾರ್ತೀಕ ದೀಪೋತ್ಸವ ನಡೆಯಲಿದೆ.
ನ.10ರಂದು ಬೆಳಿಗ್ಗೆ 11ಗಂಟೆಗೆ ಜನ್ಮ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ, ಮಧ್ಯಾಹ್ನ ‘ನಗೆಹಬ್ಬ’ ಹಾಗೂ ಪ್ರಭುಕುಮಾರ ಶಿವಾಚಾರ್ಯರ ತುಲಾಭಾರ ಕಾರ್ಯಕ್ರಮ, ನಂತರ ಈ ಕಾರ್ಯಕ್ರಮಗಳಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ದಾನಿಗಳ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಜನ್ಮ ಸುವರ್ಣ ಮಹೋತ್ಸವ ಸೇವಾ ಸದ್ಭಕ್ತ ಮಂಡಳಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.