ತಾಳಿಕೋಟೆ: ಪಟ್ಟಣದ ಬಜಾರ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಸುಮಾರು ₹10 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಮುಕ್ತಿ ವಾಹನವನ್ನು ದಸರಾ ಹಬ್ಬದಂದು ಖಾಸ್ಗತ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಪೂಜಿಸಿ ಸಾರ್ವಜನಿಕ ಸೇವೆಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಜಾರ ಬಸವೇಶ್ವರ ದೇವ ಸ್ಥಾನ ಸಮಿತಿ ₹10 ಲಕ್ಷ ವೆಚ್ಚ ಮಾಡಿ ಮುಕ್ತಿ ವಾಹನ ಖರೀದಿಸಿ ಬಹುದಿನಗಳ ಅಪೇಕ್ಷೆ ಈಡೇರಿಸಿದೆ ಎಂದರು.
ಕಾಶಿನಾಥ ಮುರಾಳ, ಅಶೋಕ ಹಂಚಲಿ ಮಾತನಾಡಿದರು. ಮುಕ್ತಿ ವಾಹನವನ್ನು ಸ್ಥಳೀಯ ಬಳಕೆಗೆ ₹1,500 ಹಾಗೂ ತಾಲ್ಲೂಕಿನ ಹೊರ ಗ್ರಾಮಗಳಿಗೆ ಬೇಕಾದವರು ₹2,500 ಪಾವತಿಸಬೇಕು. ಹಿರಿಯರಾದ ಎಸ್.ಎ.ಸರೂರ, ಬಿ.ಎಸ್.ಗಬಸಾವಳಗಿ, ವಿ.ಬಿ.ಸಜ್ಜನ, ಎಂ.ಎಸ್.ಸರಶೆಟ್ಟಿ, , ಕಾಶಿನಾಥ ಸಜ್ಜನ, ಪರಶುರಾಮ ತಂಗಡಗಿ, ವಾಸುದೇವ ಹೆಬಸೂರ, ಶಶಿಧರ ಡಿಸಲೆ, ಗಂಗಾಧರ ಕಸ್ತೂರಿ , ಬಾಬು ಹಜೇರಿ, ಬಾಬು ಕಾರಜೋಳ, ನಾಗಣ್ಣ ಚಿನಗುಡಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.