ADVERTISEMENT

ವಿಜಯಪುರ: ಟಾಟಾ ಏಸ್‌ –ಗೂಡ್ಸ್ ಲಾರಿ ನಡುವೆ ಡಿಕ್ಕಿ, ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 13:25 IST
Last Updated 16 ಜುಲೈ 2021, 13:25 IST

ವಿಜಯಪುರ: ತಾಲ್ಲೂಕಿನ ಅರಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಟಾಟಾ ಏಸ್ ಹಾಗೂ ಗೂಡ್ಸ್ ಲಾರಿಯ ನಡುವೆ ಡಿಕ್ಕಿಯಾಗಿ, ಟಾಟಾ ಏಸ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಲೋಣಿ ಗ್ರಾಮದ ಬುದ್ದಯ್ಯ ರಾಚಯ್ಯ ಹಿರೇಮಠ (70), ಪ್ರತೀಕ್‌ ರಾಚಯ್ಯ ಹಿರೇಮಠ (27), ಸಿದ್ರಾಮ ದಾನಯ್ಯ ಹಿರೇಮಠ (22) ಎಂದು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.