ADVERTISEMENT

ನಾಲತವಾಡ| ಅನ್ನಭಾಗ್ಯದ ಜೊತೆಗೆ ಸೀರೆ: ನಾಡಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 14:19 IST
Last Updated 26 ಮಾರ್ಚ್ 2023, 14:19 IST
ನಾಲತವಾಡದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ವಿತರಿಸಿ ಮಾಜಿ ಸಚಿವ ನಾಡಗೌಡ ಮಾತನಾಡಿದರು 
ನಾಲತವಾಡದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ವಿತರಿಸಿ ಮಾಜಿ ಸಚಿವ ನಾಡಗೌಡ ಮಾತನಾಡಿದರು    

ನಾಲತವಾಡ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ, ನಾನೂ ಸಹ ಈ ಬಾರೀ ಗೆದ್ದೇ ಗೆಲ್ಲುತ್ತೇನೆ, ಮುಂದಿನ ದಿನಗಳಲ್ಲಿ ಅನ್ನಭಾಗ್ಯದ ಜೊತೆಗೆ ಮಹಿಳೆಯರಿಗೆ ಗುಣ ಮಟ್ಟದ ಸೀರೆಗಳನ್ನು ಉಚಿತ ಹಂಚಿಕೆ ಮಾಡುವ ಯೋಜನೆ ಜಾರಿಗೆ ತರಲು ನಮ್ಮ ನಾಯಕರನ್ನು ಒತ್ತಾಯಿಸುತ್ತೇನೆ. ದಯವಿಟ್ಟು ಬಿಜೆಪಿಯವರು ಹಂಚುವ ಸೀರೆಗಳಿಗೆ ಮಾರು ಹೋಗಬೇಡಿ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಹೇಳಿದರು.

ಇಲ್ಲಿಯ ದೇಶಮುಖ ಹಾಗೂ ಹಟ್ಟಿ ಓಣಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಮಹಿಳೆಯರಿಗೆ ವಿತರಣೆ ಮಾಡಿ ಅವರು ಮಾತನಾಡಿದರು.

ಬಿಜೆಪಿಯವರ ಹರಿದು ಹೋಗುವ ಸೀರೆಗಳು ಬೇಕಾ ಅಥವಾ ಹರಿಯದ ಸೀರೆಯಂತಿರುವ ಶಾಶ್ವತ ಬದುಕಿಗೆ ಆಸರೆಯಾಗುವ ಕಾಂಗ್ರೇಸ್ ಪಕ್ಷದ ಯೋಜನೆಗಳು ಬೇಕಾ? ನೀವೇ ತಿರ್ಮಾನಿಸಿ ಎಂದರು.

ADVERTISEMENT

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಜನರ ಸೇವೆ ಮಾಡಿ ಆಸ್ತಿ ಕಳೆದುಕೊಂಡು ಬದುಕುತ್ತಿರುವ ನಾಡಗೌಡ ದೇಶಮುಖ ಮನೆತನದ ಹೆಸರಿಗೆ ಕಪ್ಪು ಚುಕ್ಕಿ ತರುವ ಕೆಲಸ ಕ್ಷೇತ್ರದಲ್ಲಿ ನಡೆಯುತ್ತಿದೆ ಜಾಗೃತರಾಗಿ ಎಂದರು.

ಗಗನಕ್ಕೇರಿದ ಸಿಲಿಂಡರ್ ದರ, ತಿನ್ನುವ ಅಕ್ಕಿಗೂ ಬಿಜೆಪಿ ಸರ್ಕಾರ ಕತ್ತರಿ ಹಾಕಿದೆ, ರೈತರ ಸಾಲ ಮನ್ನಾ ಮಾಡಲಿಲ್ಲ ಈ ಕುರಿತು ಉದ್ದುದ್ದ ಭಾಷಣ ಮಾಡುವ ಬಿಜೆಪಿಯವರಿಗೆ ಪ್ರಧಾನಿ ಮೋದಿಯವರನ್ನು ಕೇಳುವ ತಾಕತ್ತೇ ಇಲ್ಲ, ಅದಕ್ಕಾಗಿ ಬಿಜೆಪಿಯವರನ್ನು ಮನೆಗೆ ಕಳುಹಿಸಬೇಕಿದೆ ಎಂದರು.

ನಾಗರಾಜ ತಂಗಡಗಿ ಗ್ಯಾರಂಟಿ ಕಾರ್ಡ್ ಹಾಗೂ ವಿದ್ಯಾನಿಧಿ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ.ಪಂ ಸದಸ್ಯರಾದ ಪೃಥ್ವಿರಾಜ ನಾಡಗೌಡ, ರಾಯನಗೌಡ ತಾತರಡ್ಡಿ, ಸಂಗಪ್ಪ ಬಾರಡ್ಡಿ, ಪರಶುರಾಂ ಮೆದಿಕನಾಳ, ಶೇಖಪ್ಪ ಕ್ಷತ್ರಿ, ಅಮರಪ್ಪ ಬಾರಡ್ಡಿ, ಸಂಗಪ್ಪ ಬಾರಡ್ಡಿ, ಮುತ್ತಣ್ಣ ಹನಮಂತ ಯರಗೋಡಿ, ಮುತ್ತು ಕ್ಷತ್ರಿ, ಪ.ಪಂ ಸದಸ್ಯರಾದ ಸಂಗಪ್ಪ ಬಾರಡ್ಡಿ, ಪಾಪಣ್ಣ ಗಾದಿ, ಬಾಲಪ್ಪ ಕ್ಷತ್ರಿ, ರಾಯಪ್ಪ ಮೆದಿಕನಾಳ, ನೀಲಪ್ಪ ಮಾಗಿ, ಮಹಾಂತೇಶ ಚಿತ್ರನಾಳ, ಸಂಗಪ್ಪ ಮುದ್ನೂರ, ಉಮರಫಾರೂಕ ಮೂಲಿಮನಿ, ಹನಮಂತ ಕುರಿ, ಸುಭಾಸ ನಾಡಗೌಡ, ಕಾಶೀಮಸಾಬ ಎತ್ತಿನಮನಿ, ಕಮಲಾ ಭಜಂತ್ರಿ, ಅನ್ನಪೂರ್ಣ ಯಗಡಿಹಾಳ, ಲಕ್ಷ್ಮವ್ವ ಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.