
ಪ್ರಜಾವಾಣಿ ವಾರ್ತೆ
ಸಿಂದಗಿ (ವಿಜಯಪುರ ಜಿಲ್ಲೆ): ‘ತಾಲ್ಲೂಕಿನ ಚಾಂದಕವಠೆ ಗ್ರಾಮದಲ್ಲಿ ನ.8 ರಂದು ಅಂತರರಾಷ್ಟ್ರೀಯ ಜಂಗಿ ಕುಸ್ತಿ ಪಂದ್ಯ ಆಯೋಜಿಸಲಾಗಿದ್ದು, ಇರಾನ್ನ ಮಿರ್ಜಾ ಖಾನ್ ಮತ್ತು ಭಾರತ ಕೇಸರಿ ಸಿಕಂದರ ಶೇಖ್ ಅವರ ಮಧ್ಯೆ ಜಂಗಿ ಕುಸ್ತಿ ನಡೆಯಲಿದೆ’ ಎಂದು ಪಂದ್ಯದ ನೇತೃತ್ವ ವಹಿಸಿರುವ ನಾಗಪ್ಪ ಶಿವೂರ ಹೇಳಿದರು.
‘ಕನಕದಾಸ ಜಯಂತಿ ಪ್ರಯುಕ್ತ ಪಂದ್ಯ ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ₹5 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಕೊಲ್ಲಾಪುರ, ಪುಣೆ, ಕುರಡವಾಡಿ, ಹಾರೂಗೇರಿ, ಮಂಗಳವೇಡೆ, ಪಂಢರಪುರ, ಸಾಂಗ್ಲಿ, ಬೆಳಗಾವಿ, ಮೋಹಳ, ಆಟಪಾಡಿ ಸೇರಿ ಮಹಾರಾಷ್ಟ್ರ– ಕರ್ನಾಟಕದ 28 ಕುಸ್ತಿ ಪೈಲ್ವಾನರು ಭಾಗವಹಿಸಲಿದ್ದಾರೆ. ಪ್ರಥಮ ಸ್ಥಾನ ಪಡೆಯುವ ಪೈಲ್ವಾನರಿಗೆ ₹2 ಲಕ್ಷ ಬಹುಮಾನ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.