ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ‘ನಮೋ ಸ್ಕೈ ಡೈವಿಂಗ್’ ತಂಡದ ಸದಸ್ಯರು ಬ್ಯಾಂಕಾಕ್ನಲ್ಲಿ ‘ಜೈ ಶ್ರೀರಾಮ್‘ ಘೋಷಣೆಯೊಂದಿಗೆ ಸ್ಕೈಡೈವಿಂಗ್ ಮಾಡಿದರು.
ತಂಡದ ಸದಸ್ಯರಾದ ವಿಜಯಪುರದ ರಾಜಶೇಖರ ಮುತ್ತಿನಪೆಂಡಿಮಠ, ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಮತ್ತು ಮಹಾರಾಷ್ಟ್ರದ ಹಿಮಾಂಶು ಸಾಬಳೆ ಅವರು ‘ಜೈ ಶ್ರೀರಾಮ್’ ಎಂದು ಬರೆದಿರುವ ಹಾಗೂ ಅಯೋಧ್ಯೆಯ ನೂತನ ಶ್ರೀರಾಮ ಮಂದಿರದ ಚಿತ್ರ ಇರುವ ಬ್ಯಾನರ್ ಕೈಯಲ್ಲಿ ಹಿಡಿದು 13 ಸಾವಿರ ಅಡಿ ಎತ್ತರದಿಂದ ಸುರಕ್ಷಿತವಾಗಿ ಸ್ಕೈ ಡೈವಿಂಗ್ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.