ವಿಜಯಪುರ: ತಿಕೋಟಾ ತಾಲ್ಲೂಕಿನ ತೊರವಿ ಕೆಸರಾಳ ತಾಂಡಾ ನಂ.3ರಲ್ಲಿ ಶ್ರೀ ಮಾತಾ ಕಾಳಿಕಾದೇವಿ ಜಾತ್ರಾ ಮಹೋತ್ಸವವು ಜೂನ್ 28 ರಿಂದ 29 ರವರೆಗೆ ನಡೆಯಲಿದೆ.
ಜೂನ್ 28 ರಂದು ಮಣ್ಣೆತ್ತಿನ ಅಮವಾಸ್ಯೆ ದಿನದಂದು ಬೆಳಿಗ್ಗೆ 6 ಕ್ಕೆ ಮೂಲ ಮಂತ್ರ ಪಠಣ, ಹೋಮ ಹವನ, ಪುಷ್ಪಾರ್ಚನೆ ಮತ್ತು ಮಹಾ ಮಂಗಳಾರತಿ, ಪೂಜೆ ಪುನಸ್ಕಾರ ನೆರವೇರಲಿದೆ.
ಜೂನ್ 29 ರಂದು ಬೆಳಿಗ್ಗೆ 11ಕ್ಕೆ ಮಹಾಪೂಜೆ (ಆಯುಧ ಪೂಜೆ), ಸಂಜೆ 6ಕ್ಕೆ ಶ್ರೀ ಮಾತಾ ಕಾಳಿಕಾದೇವಿ ವಾರ್ಷಿಕ ಜಾತ್ರಾ ಮಹೋತ್ಸವ ಉದ್ಘಾಟನೆ ಹಾಗೂ ಧಾರ್ಮಿಕ ಸಮಾರಂಭ ನಡೆಯಲಿದೆ.
ರಾತ್ರಿ 8ಕ್ಕೆ ‘ಮಹಾಭೋಗ’ ಮತ್ತು ಭಕ್ತಾದಿಗಳಿಂದ ವೈಯಕ್ತಿಕ ಹಾಗೂ ಸಾಮೂಹಿಕ ಪೂಜೆ, ಪುನಸ್ಕಾರ ನಂತರ ಮಹಾಪ್ರಸಾದ ನಡೆಯಲಿದೆ. ರಾತ್ರಿ 10ಕ್ಕೆ ಧನಸಿಂಗ ಮಹಾರಾಜರಿಂದ ಹೇಳಿಕೆ ಇದೆ. ರಾತ್ರಿ 10.30ಕ್ಕೆ ಸುಪ್ರಸಿದ್ದ ಬಂಜಾರಾ ಭಜನಾ ಕಾರ್ಯಕ್ರಮ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.