ADVERTISEMENT

ಶ್ರೀಸಿದ್ಧೇಶ್ವರ ಬ್ಯಾಂಕ್‌: ಬಗಲಿ ಅಧ್ಯಕ್ಷ, ಬೋರಮ್ಮ ಉಪಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 12:41 IST
Last Updated 17 ನವೆಂಬರ್ 2020, 12:41 IST
ಪ್ರಕಾಶ ಬಗಲಿ
ಪ್ರಕಾಶ ಬಗಲಿ   

ವಿಜಯಪುರ: ಜಿಲ್ಲೆಯಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕಿಗೆಸತತ ನಾಲ್ಕು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಕಾಶ ಬಗಲಿ ಅಧ್ಯಕ್ಷರಾಗಿ, ಸತತ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಗೊಂಡ ಬೋರಮ್ಮ ಬಾಬು ಗೊಬ್ಬೂರ ಉಪಾಧ್ಯಕ್ಷರಾಗಿಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳಾ ಉಪಾಧ್ಯಕ್ಷೆ ಎಂಬುವ ಹಿರಿಮೆಗೆ ಬೋರಮ್ಮ ಪಾತ್ರರಾದರು.

ಶಿವಪ್ಪ ಬಗಲಿ ಅವರು ಈ ಹಿಂದೆ ಸಿದ್ಧೇಶ್ವರ ಸಂಸ್ಥೆ ನಿರ್ದೇಶಕರಾಗಿ ಹಾಗೂ ವಿಜಯಪುರ ನಗರಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

ಅಧ್ಯಕ್ಷರಾದ ಪ್ರಕಾಶ ಶಿವಪ್ಪ ಬಗಲಿ ಅವರಿಗೆ ನಿರ್ದೇಶಕರಾದ ಜಿ.ಎಸ್.ಗಚ್ಚಿನಮಠ ಸೂಚಕರಾಗಿ ಹಾಗೂ ವಿ.ಆರ್. ಅವರಂಗಬಾದ ಅನುಮೋದಕರಾಗಿ ಪಾಲ್ಗೊಂಡರು. ‌

ಉಪಾಧ್ಯಕ್ಷರಾದ ಬೋರಮ್ಮ ಬಾಬು ಗೊಬ್ಬೂರ ಅವರಿಗೆ ನಿರ್ದೇಶಕರಾದ ಎಸ್.ಎಸ್.ಭೋವಿ ಹಾಗೂ ಅನುಮೋದಕರಾಗಿ ಆರ್.ಎಚ್.ಬಿದನೂರ ಪಾಲ್ಗೊಂಡರು.

ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅವರ ಅಭಿಮಾನಿಗಳು ಅಭಿನಂದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

2020-2025 ನೇ ಸಾಲಿನ ಆಡಳಿತ ಮಂಡಳಿಗೆ ಇತ್ತೀಚಿಗೆ ನಡೆದಚುನಾವಣೆಯಲ್ಲಿ ಹಳೇ ಪೆನಲ್ ಜಯಭೇರಿ ಹೊಂದಿತ್ತು.ಚುನಾವಣಾ ಅಧಿಕಾರಿ ಪಿ.ಬಿ.ಕಾಳಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.