ADVERTISEMENT

‘ಭಾರತೀಯ ರಾಜಕಾರಣದ ಧೃವತಾರೆ ಉಪಾಧ್ಯಯ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:54 IST
Last Updated 12 ಫೆಬ್ರುವರಿ 2021, 15:54 IST
ವಿಜಯಪುರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯರ ಪುಣ್ಯ ತಿಥಿ ಅಂಗವಾಗಿ ಸಮರ್ಪಣಾ ದಿನಾಚರಣೆ ಆಚರಿಸಲಾಯಿತು
ವಿಜಯಪುರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯರ ಪುಣ್ಯ ತಿಥಿ ಅಂಗವಾಗಿ ಸಮರ್ಪಣಾ ದಿನಾಚರಣೆ ಆಚರಿಸಲಾಯಿತು   

ವಿಜಯಪುರ: ಪಂಡಿತ್‌ ದೀನ ದಯಾಳ ಉಪಾಧ್ಯಯರುಭಾರತದ ರಾಜಕಾರಣದಲ್ಲಿ ಕಂಡು ಬರುವ ಅಪರೂಪದ ರಾಜಕಾರಣಿ. ತಮಗಾಗಿ ಬಾಳದೇ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದರು.

ನಗರದ ರಾಜ ರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್‌ ದೀನ ದಯಾಳ ಉಪಾಧ್ಯಾಯರ ಪುಣ್ಯ ತಿಥಿ ಅಂಗವಾಗಿ ಏರ್ಪಡಿಸಿದ್ದ ಸಮರ್ಪಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಉಪಾಧ್ಯಾಯ ಅವರು ಸರಳ ಜೀವನ, ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಏಕಾತ್ಮ ಮಾನವತಾವಾದ ತತ್ವದ ಪ್ರತಿಪಾದಕರಾಗಿ ರಾಷ್ಟ್ರಕಾರ್ಯ ವ್ಯಕ್ತಿಗತ ಸ್ವಾರ್ಥಕ್ಕಿಂತಲೂ ದೊಡ್ಡದು, ಮನುಷ್ಯ ತನಗಾಗಿ ಬಾಳದೇ ರಾಷ್ಟ್ರಕ್ಕಾಗಿ ಬಾಳಬೇಕು ಎಂದು ಭಾರತೀಯರ ಕರ್ತವ್ಯವನ್ನು ಜಾಗೃತಗೊಳಿಸಿದ ಚಿಂತಕರಾಗಿದ್ದಾರೆ ಎಂದರು.

ADVERTISEMENT

ಪಂಡಿತ್ ದೀನ ದಯಾಳ ಉಪಾಧ್ಯಾಯ ಅವರು ಭಾರತದ ರಾಜಕಾರಣದಲ್ಲಿ ಕಂಡು ಬಂದ ಅಪರೂಪದ ಆದರ್ಶ ವ್ಯಕ್ತಿ. ಇವರು ಜನಸಂಘದ ಅಪ್ರತಿಮ ವಾಗ್ಮಿ, ಸಂಘಟನಾ ಚತುರರಾಗಿದ್ದರು ಎಂದು ಹೇಳಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ಶಿಲ್ಪಾ ಕುದರಗೊಂಡ, ಬಸವರಾಜ ಬಿರಾದಾರ, ಪಾಪುಸಿಂಗ್ ರಜಪೂತ, ಭೀಮಾಶಂಕರ ಹದನೂರ, ವಿಜಯ ಜೋಶಿ, ಛಾಯಾ ಮಸಿ, ಭರತ ಕೋಳಿ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.