ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಚುನಾವಣೆಯನ್ನು ಪಾರದರ್ಶಕ, ನ್ಯಾಯಸಮ್ಮತವಾಗಿ ಮತ್ತು ಯಶಸ್ವಿಯಾಗಿ ನಡೆಸಿದ ಜಿಲ್ಲೆಯ ನಾಲ್ವರು ಅಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ರಾಜ್ಯಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿಮಂಗಳವಾರ ನಡೆದ12 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿಜಿಲ್ಲೆಯ ನಾಲ್ವರು ಹಿರಿಯ ಅಧಿಕಾರಿಗಳಿಗೆ ರಾಜ್ಯಪಾಲರು ವರ್ಚ್ಯುವೆಲ್ ಮೂಲಕ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಅವರಿಗೆ ‘ಬೆಸ್ಟ್ ಪರ್ಪೊರ್ಮನ್ಸ್ ಇನ್ ಎಲೆಕ್ಟ್ರೋಲ್ ಪ್ರಾಕ್ಟಿಸಿಸ್‘ ಪ್ರಶಸ್ತಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೋವಿಂದ ರೆಡ್ಡಿ ಅವರಿಗೆ ‘ಬೆಸ್ಟ್ ಪರ್ಪೊರ್ಮನ್ಸ್ ಇನ್ ಸ್ವೀಪ್’, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಅವರಿಗೆ ‘ಬೆಸ್ಟ್ ಪರ್ಪೊರ್ಮನ್ಸ್ ರಿರ್ಟನಿಂಗ್ ಆಫೀಸರ್’ ಹಾಗೂತಿಕೋಟಾ ಪಿಯು ಕಾಲೇಜಿನ ಎ.ಬಿ ಜತ್ತಿ ಅವರಿಗೆ ‘ಬೆಸ್ಟ್ ಪರ್ಪೊರ್ಮನ್ಸ್ ಎಲೆಕ್ಟ್ರೋಲ್ ಲಿಟ್ರೆಸಿ ಕ್ಲಬ್’ ಪ್ರಶಸ್ತಿ ಲಭಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.