ವಿಜಯಪುರ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ಅಧ್ಯಕ್ಷ ಹಾಗೂ ಸಂಯೋಜಕರಾಗಿ ಆಯ್ಕೆಯಾದ ಮುಖಂಡರಿಗೆ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಸನ್ಮಾನಿಸಿದರು.
ಖಾದಿ ಬಂಡಾರ ಚೌಕಿನಲ್ಲಿರುವ ವಿಜಯಪುರ ನಗರ ಪ್ರಚಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ ಟಪಾಲ್, ಸಂಯೋಜಕ ಸೋಮನಾಥ ಕಳ್ಳಿಮನಿ, ಸುರೇಶ್ ಗೊಣಸಗಿ, ಯಾಕೂಬ ಜತ್ತಿ, ಸರತಾಜ್ ಬೀಳಗಿ, ಅಲ್ಲಿಸಾಬ್ ಖಡಕೆ ಅವರನ್ನು ಸನ್ಮಾನಿಸಲಾಯಿತು.
ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಪಕ್ಷ ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿ ನೀಡಿದೆ. ನಿಮ್ಮ ಅವಧಿಯಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಲಿ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಪ್ರತಿಯೊಬ್ಬ ನಾಗರಿಕರಿಗೂ ನಮ್ಮ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆಗಳು, ಕಾಂಗ್ರೆಸ್ ಪಕ್ಷ ಜನರಿಗಾಗಿ ನೀಡಿದ ಮಹತ್ವಕಾಂಕ್ಷಿ ಕಾರ್ಯಗಳು, 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹ 2 ಸಾವಿರ ನೀಡುವುದು ಸೇರಿದಂತೆ ಇನ್ನೂ ಹಲವಾರು ಭರವಸೆಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರೋಣ. ವಿಜಯಪುರದ ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದೋಣ ಎಂದು ಹೇಳಿದರು.
ಮುಖಂಡರಾದ ಗಂಗಾಧರ ಸಂಬಣ್ಣಿ, ವೈಜನಾಥ ಕರ್ಪೂರ ಮಠ, ಚಾಂದ್ ಸಾಬ್ ಗಡಗವಾಲ, ಚಂದ್ರಕಾಂತ್ ಶೆಟ್ಟಿ, ದಿನೇಶ್ ಅವಟಿ, ಆರತಿ ಶಹಪುರ, ಅಪ್ಪು ಪೂಜಾರಿ, ಜಮೀರ್ ಬಾಂಗಿ, ಜಮೀರ್ ಬಕ್ಷಿ, ಶಹಜಾನ್ ಮುಲ್ಲಾ, ಫಯಾಜ್ ಕಲಾದಗಿ, ಆನಂದ ಜಾದವ್, ಶಬ್ಬೀರ್ ಜಹೀರದಾರ, ಸಾಹೇಬ್ ಗೌಡ ಬಿರಾದರ, ಸುಜಾತಾ ಕಳ್ಳಿಮನಿ, ಸಲೀಂ ಪಿರಜಾದೆ, ವಸಂತ ಹೊನಮೋಡೆ, ಲಲಿತ ದೊಡ್ಡಮನಿ, ಸಲೀಂ ಕಲಾದಗಿ, ಇಲಿಯಾಸ್ ಸಿದ್ಧಕಿ, ಹರೀಶ್ ಕೌಲಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.