ADVERTISEMENT

ಬಬಲೇಶ್ವರ: ಬಿರುಗಾಳಿಗೆ ನಿಲಕ್ಕುರುಳಿದ ಶಾಲೆ ಕಾಂಪೌಂಡ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 12:18 IST
Last Updated 1 ಜೂನ್ 2023, 12:18 IST
ಮಂಗಳವಾರ ಸಂಜೆ ಬೀಸಿದ ಬಾರಿ ಬಿರುಗಾಳಿಗೆ ತಾಲ್ಲೂಕಿನ ಕನಮುಚನಾಳ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್‌ ಹಾಗೂ ಆವರಣದ ಮರಗಳು ನೆಲಕ್ಕುರುಳಿವೆ
ಮಂಗಳವಾರ ಸಂಜೆ ಬೀಸಿದ ಬಾರಿ ಬಿರುಗಾಳಿಗೆ ತಾಲ್ಲೂಕಿನ ಕನಮುಚನಾಳ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್‌ ಹಾಗೂ ಆವರಣದ ಮರಗಳು ನೆಲಕ್ಕುರುಳಿವೆ   

ಬಬಲೇಶ್ವರ: ಮಂಗಳವಾರ ಸಂಜೆ ಬೀಸಿದ ಬಾರಿ ಬಿರುಗಾಳಿಗೆ ತಾಲ್ಲೂಕಿನ ಕನಮುಚನಾಳ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್‌ ಹಾಗೂ ಆವರಣದ ಮರಗಳು ನೆಲಕ್ಕುರುಳಿದೆ.

ಎನ್‌.ಜಿ.ಇ.ಜಿ ಅಡಿ ನಿರ್ಮಿಸಲಾಗಿದ್ದ ಕಂಪೌಂಡ್‌ ಮಳೆಗೆ ಸಂಪೂರ್ಣ ನೆಲಕ್ಕುರುಳಿದ್ದು, ಶಾಲೆಯ ಆವರಣದಲ್ಲಿನ ಮರಗಳು ಮುರಿದು ಬಿದ್ದಿದೆ. ಶಾಲೆಯ ಪ್ರಾರಂಭದ ಖುಷಿಯಲ್ಲಿದ್ದ ಮಕ್ಕಳಿಗೆ ಭಯ ಉಂಟಾಗಿದೆ. ಶೀಘ್ರದಲ್ಲಿ ಶಾಲೆಯ ಕಾಂಪೌಂಡ್‌  ನಿರ್ಮಿಸಿ ಕೊಡುವಂತೆ ಶಾಲೆ ಮಕ್ಕಳು ಒತ್ತಾಯಿಸಿದ್ದಾರೆ.

ಶಾಲೆ ಕಾಂಪೌಂಡ್‌ ನೆಲಕ್ಕುರುಳಿರುವ ಬಗ್ಗೆ ಈಗಾಗಲೇ ಬಿ.ಇ.ಒ ಹಾಗೂ ಪಿಡಿಒ ಅವರಿಗೆ ತಿಳಿಸಲಾಗಿದ್ದು ವರದಿಯನ್ನು ಸಿದ್ಧಪಡಿಸಿ ನೀಡುವಂತೆ ಹೇಳಿದ್ದಾರೆ. ವರದಿ ಸಿದ್ಧಪಡಿಸಿ ನೀಡಲಾಗುವುದು ಎಂದು ಶಾಲೆಯ ಮುಖ್ಯಶಿಕ್ಷಕರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.