ಸಾಂದರ್ಭಿಕ ಚಿತ್ರ
ಸೋಲಾಪುರ: ನೈರುತ್ಯ ರೈಲ್ವೆ ವಿಭಾಗ ವ್ಯಾಪ್ತಿಯ ಬಾಗಲಕೋಟೆಯಲ್ಲಿ ನಡೆಯುತ್ತಿರುವ ಕಾಮಗಾರಿ ನಿಮಿತ್ತವಾಗಿ ಸೋಲಾಪುರ- ಹುಬ್ಬಳ್ಳಿ ಮಧ್ಯದಲ್ಲಿ ಸಂಚರಿಸುವ ರೈಲುಗಳ ಸಂಚಾರ ಸೇವೆಯನ್ನು ಏಪ್ರಿಲ್ 21ರಿಂದ 25ರವರೆಗೆ ರದ್ದುಗೊಳಿಸಲಾಗಿದೆ.
ಹುಬ್ಬಳ್ಳಿ -ಸೋಲಾಪುರ ಪ್ಯಾಸೆಂಜರ್ (56906) ಏಪ್ರಿಲ್ 21ರಿಂದ 24ರವರೆಗೆ, ಸೋಲಾಪುರ- ಧಾರವಾಡ ಪ್ಯಾಸೆಂಜರ್ (56903) ಏಪ್ರಿಲ್ 22ರಿಂದ 25ರವರೆಗೆ, ಸೋಲಾಪುರ - ಹೊಸಪೇಟೆ ಎಕ್ಸ್ ಪ್ರೆಸ್(11415) ಏಪ್ರಿಲ್ 22 ರಿಂದ 24ರ ವರೆಗೆ ಹಾಗೂ ಹೊಸಪೇಟೆ- ಸೋಲಾಪುರ ಎಕ್ಸ್ ಪ್ರೆಸ್(11416) ಏಪ್ರಿಲ್ 23ರಿಂದ 25ರವರೆಗೆ ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.