ADVERTISEMENT

ವಿಜಯಪುರ: ತೋಳ ದಾಳಿಗೆ 13 ಕುರಿಮರಿಗಳು ಬಲಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 14:01 IST
Last Updated 25 ಏಪ್ರಿಲ್ 2024, 14:01 IST
   

ವಿಜಯಪುರ: ದೇವರಹಿಪ್ಪರಗಿ ತಾಲ್ಲೂಕಿನ ದೇವೂರ ಗ್ರಾಮದ ಜಮೀನಿನಲ್ಲಿ ಬುಧವಾರ ರಾತ್ರಿ ತೋಳದ ದಾಳಿಗೆ ಸಿಲುಕಿ 13 ಕುರಿಮರಿಗಳು ಸಾವಿಗೀಡಾಗಿವೆ.

ದೇವರಹಿಪ್ಪರಗಿ ನಿವಾಸಿ ಗೊಲ್ಲಾಳಪ್ಪ ಹೊನ್ನಮಿಸಿ ಅವರು ಕುರಿ ಮೇಯಿಸಿಕೊಂಡು ಬಂದು ರಾತ್ರಿ  ದೊಡ್ಡಿಯಲ್ಲಿ ಕುರಿಗಳು ಹಾಗೂ ಮರಿಗಳನ್ನು ಪ್ರತ್ಯೇಕವಾಗಿ ಕೂಡಿಹಾಕಿದ್ದರು. ನಡುರಾತ್ರಿಯಲ್ಲಿ ಮರಿಗಳ ಮೇಲೆ ದಾಳಿ ಮಾಡಿದ ತೋಳ ಅಂದಾಜು ₹ 1 ಲಕ್ಷ ಮೌಲ್ಯದ 13 ಕುರಿಮರಿಗಳನ್ನು ಕೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT