ADVERTISEMENT

ವಿಶ್ವಕರ್ಮ ಜನಜಾಗೃತಿ ಸಮಾವೇಶ ಆ.30ಕ್ಕೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 16:17 IST
Last Updated 24 ಆಗಸ್ಟ್ 2022, 16:17 IST

ವಿಜಯಪುರ: ವಿಶ್ವಕರ್ಮಸಮಾಜಕ್ಕೆ ಎಸ್‌.ಟಿ.ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿಆಗಸ್ಟ್‌ 30ರಂದು ಜಿಲ್ಲೆಯ ವಿವಿಧೆಡೆ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದುಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಮೋದ ಬಡಿಗೇರ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11ಕ್ಕೆ ನಾಗಠಾಣ, ಮಧ್ಯಾಹ್ನ 1ಕ್ಕೆ ಇಂಡಿ, ಸಂಜೆ 4ಕ್ಕೆ ಚಡಚಣ ಮತ್ತು ಸಂಜೆ 7ಕ್ಕೆ ಹೊರ್ತಿಯಲ್ಲಿನಡೆಯುವ ಜನಜಾಗೃತಿ ಸಮಾವೇಶದಲ್ಲಿವಿಧಾನ ಪರಿಷತ್‌ ಸದಸ್ಯರಾದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಭಾಗವಹಿಸಿ, ಮುಂದಿನ ಹೋರಾಟದ ರೂಪುರೇಷೆಗಳ ಚರ್ಚೆ ನಡೆಸಲಿದ್ದಾರೆ ಎಂದರು.

ಸಮಾವೇಶಕ್ಕೂ ಮುನ್ನಾ ಅಂದು ಬೆಳಿಗ್ಗೆ 9ಕ್ಕೆ ವಿಜಯಪುರ ನಗರದ ಗುಂಡಬಾವಡಿ ಹತ್ತಿರ ಇರುವ ಶ್ರೀಕಾಳಿಕಾ ದೇವಿಯ ದರ್ಶನ ಪಡೆಯಲಿದ್ದಾರೆ ಎಂದರು.

ADVERTISEMENT

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಾಳು ಗಿರಗಾಂವಕ್ಕರ್‌, ಮುಖಂಡರಾದ ಸಂತೋಷ ವಿಶ್ವಕರ್ಮ, ಎಂ.ಕೆ.ಪತ್ತಾರ, ಶಿವಾನಂದ ಪತ್ತಾರ ಯರನಾಳ, ಅಶೋಕ ಬೆಂಡಿಗೇರಿ, ವಿಶ್ವನಾಥ ಕುಂದಣಗಾರ, ಗಿರೀಶ ಕಮ್ಮಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.