ADVERTISEMENT

ನೆಮ್ಮದಿ ನೌಕರರ ಸೇವೆ ಮುಂದುವರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 7:35 IST
Last Updated 18 ಆಗಸ್ಟ್ 2012, 7:35 IST

ಯಾದಗಿರಿ: ನೆಮ್ಮದಿ ಕೇಂದ್ರಗಳಲ್ಲಿನ 1,600 ಗ್ರಾಮೀಣ ಕಂಪ್ಯೂಟರ್ ಆಪರೇಟರ್‌ಗಳ ಪರವಾಗಿ ಕೆಲಸ ಮಾಡುತ್ತಿರುವ ನೌಕರರನ್ನೇ ನೆಮ್ಮದಿ ಕೇಂದ್ರಗಳಲ್ಲಿ ಡಾಟಾ ಆಪರೇಟರ್‌ಗಳಾಗಿ ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದು ನೆಮ್ಮದಿ ಕೇಂದ್ರಗಳ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯವು ನೆಮ್ಮದಿ ಕೇಂದ್ರಗಳ ಮೂಲಕ ಸರ್ಕಾರದ ಸೇವೆಯನ್ನು ಗ್ರಾಮೀಣ ಜನತೆಯ ಬಾಗಿಲಿಗೆ ತಲುಪುವಂತೆ ಮಾಡಿದ್ದು, ರಾಷ್ಟ್ರದಲ್ಲೆ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆಮ್ಮದಿ ಯೋಜನೆಯು ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಸಲಾಗಿದ್ದು, ಈ ಕಾರ್ಯನಿರ್ವಣೆಗಾಗಿ ನೇಮಿಸಿಕೊಳ್ಳಲಾಗಿದ 1,600 ಕಂಪ್ಯೂಟರ್ ಆಪರೇಟರ್‌ಗಳು, ಈ ಸೇವೆಯ ಜನಪ್ರಿಯತೆ ಹಾಗೂ ಯಶಸ್ಸಿಗೆ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

ಆದರೆ ಏಕಾಏಕಿ ಅವರನ್ನು ಸೇವೆಯಿಂದ ತೆಗೆದರೆ ಕುಟುಂಬಗಳು ಬೀದಿ ಪಾಲಾಗಲಿವೆ. ಕೂಡಲೆ ನೆಮ್ಮದಿ ಕೇಂದ್ರಗಳಲ್ಲಿನ ಕಂಪ್ಯೂಟರ್ ಆಪರೇಟರ್‌ಗಳನ್ನು ಡಾಟಾ ಎಂಟ್ರಿ ಆಪರೇಟರ್‌ಗಳೆಂದು ವಿಲೀನಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾಯಿ ರಡ್ಡಿ, ಗಣೇಶ ಆವಂಟಿ, ಯಲ್ಲಾಲಿಂಗ ಕಂದಕೂರ, ಅಂಜನಾದೇವಿ, ನಿಂಗಮ್ಮ ಮನವಿ ಮಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.