ಕೆಂಭಾವಿ: ಮಕ್ಕಳು ಕಲಿಕೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಸಾಮರ್ಥ್ಯವೂ ಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣದ ಜೊತೆಗೆ ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸಿಆರ್ಪಿ ಮಲ್ಲಣ್ಣ ಸುರಪುರ ಹೇಳಿದರು.
ಸಮೀಪದ ತಳಹಳ್ಳಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಯಕ್ತಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಎಲ್ಲ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ, ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ನೈಜ ಕಲೆಯನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು.
ಅಗ್ನಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಂಡಪ್ಪಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥರೆಡ್ಡಿ ಪಾಟೀಲ, ಸಿದ್ದನಗೌಡ ಹೊಸಮನಿ, ಬಸವರಾಜ ಹೂಗಾರ, ಶಿವಪುತ್ರ ಬಂಟನೂರ, ಮಾನಶಪ್ಪ ಬಿರಾದಾರ, ಹಳ್ಳೆಪ್ಪ ಸುರಪುರ, ಶಾಂತಪ್ಪ ಸಾತಿಹಾಳ, ಹಣಮಂತ್ರಾಯ ಕುಳಗೇರಿ, ದೇವೇಂದ್ರ ಸಾತಿಹಾಳ, ನಬಿಸಾಬ ಬಿರಾಳ, ನಿಂಗಣ್ಣ ಸಾಹು, ಶರಣಪ್ಪ ಸಾಹು, ಬಸನಗೌಡ ವಠಾರ, ಸಂಗಯ್ಯ ಬಾಚಿಹಾಳ ಇದ್ದರು.
ಮುಖ್ಯಶಿಕ್ಷಕ ಸಾಹೇಬಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ವಸ್ತ್ರದ ಸ್ವಾಗತಿಸಿದರು. ರಾಮನಗೌಡ ಮುದನೂರ ನಿರೂಪಿಸಿದರು. ಅಮರೇಶ ಅರಕೇರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.