ಶಹಾಪುರ: ‘ಅಂಗವಿಕಲರು ಎಂದರೇ ಅಸಮರ್ಥರು ಎನ್ನುವ ತಪ್ಪು ಭ್ರಮೆ ಬೇಡ. ಅವರಲ್ಲಿಯೂ ವಿಶೇಷ ಸಾಮರ್ಥ್ಯ ಇರುತ್ತದೆ. ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ
ತಿಳಿಸಿದರು.
ನಗರದ ಶಾಸಕರ ಕಛೇರಿಯಲ್ಲಿ 2020-21ನೇ ಸಾಲಿನ 18 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು ವಿಶೇಷ ಅನುದಾನದಲ್ಲಿ ಇಲ್ಲಿಯವರೆಗೆ 220 ತ್ರಿಚಕ್ರ ವಾಹನ ವಿತರಣೆ ಮಾಡಿದೆ ಎಂದರು.
ಮುಖಂಡ ಬಸವರಾಜ ಹೇರುಂಡಿ, ಚಂದಪ್ಪ ಸೇರಿ, ಚಂದಪ್ಪ ಸಿತ್ನಿ, ಮೌನೇಶ ನಾಟೇಕರ್, ಭೀಮಣ್ಣ ಶಖಾಪುರ, ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಾಹೇಬ್ ಜಾನಿ, ಅಂಗವಿಕಲರ ಕಲ್ಯಾಣಧಿಕಾರಿ ನಾಗಮ್ಮ, ನಾಗರಾಜ ಹೂಗಾರ , ಮಲ್ಲಿಕಾರ್ಜುನ ಹತ್ತಿಗೂಡರ, ರಮೇಶ
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.