ADVERTISEMENT

ಜೂಜಾಟ; 10 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 5:10 IST
Last Updated 17 ಜನವರಿ 2022, 5:10 IST

ಶಹಾಪುರ: ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗಡೆ ಭಾನುವಾರ ಜೂಜಾಟ ದಲ್ಲಿ ತೊಡಗಿದ್ದ 10 ಜನರನ್ನು ಬಂಧಿಸಿ, ₹24,480 ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಭಾನುವಾರ ‘ಪ್ರಜಾವಾಣಿ’ ಯಲ್ಲಿಸಂಕ್ರಾಂತಿ ಹಬ್ಬದಲ್ಲಿ ಜೂಜಾಟ– ಆರೊಪಿಗಳನ್ನು ಬಂಧಿಸದ ಪೊಲೀಸರು; ಆರೋಪ ಎಂಬ ಶೀರ್ಷಿಕೆ ಯಡಿ ವರದಿ ಪ್ರಕಟ ವಾಗಿತ್ತು. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ, ಜೂಜಾಟದಲ್ಲಿ ನಿರತವಾದವರನ್ನುಬಂಧಿಸಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀನಿವಾಸ ಅಲ್ಲಾಪುರೆ ಹಾಗೂ ಪಿಎಸ್ಐ ಶ್ಯಾಮಸುಂದರ ನಾಯಕ ನೇತೃತ್ವದಲ್ಲಿ ದಾಳಿ ಮಾಡಿ, ಬಾಪು ನಾಯಕ, ಬೂದೆಪ್ಪ, ತಿಮ್ಮಣ್ಣ, ಪಾಪಣ್ಣ, ಮಂಜುನಾಥ, ಹನು ಮಂತ ರಾಯ, ಸಾಬಯ್ಯ, ಶೇಖಪ್ಪ, ಯಲ್ಲಪ್ಪ ಮತ್ತು ರಾಮಕೃಷ್ಣ ಬಂಧಿತ ಆರೋಪಿಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಹಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.