ADVERTISEMENT

ಯಾದಗಿರಿಯಲ್ಲಿ 11ನೇ ಶತಮಾನದ ಕನ್ನಡ ಶಿಲಾ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 10:55 IST
Last Updated 2 ಜನವರಿ 2020, 10:55 IST
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ 11ನೇ ಶತಮಾನದ ಕನ್ನಡ ಶಿಲಾ ಶಾಸನವನ್ನು ಈಚೆಗೆ ಡಾ.ಎಂ.ಎಸ್ ಶಿರವಾಳ ಪತ್ತೆ ಹಚ್ಚಿದ್ದಾರೆ
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ 11ನೇ ಶತಮಾನದ ಕನ್ನಡ ಶಿಲಾ ಶಾಸನವನ್ನು ಈಚೆಗೆ ಡಾ.ಎಂ.ಎಸ್ ಶಿರವಾಳ ಪತ್ತೆ ಹಚ್ಚಿದ್ದಾರೆ   

ಶಹಾಪುರ: ತಾಲ್ಲೂಕಿನ ದೋರನಹಳ್ಳಿಯ ಮಲ್ಲಿಕಾರ್ಜುನ ಗುಡಿಯ ಪ್ರಾಂಗಣದಲ್ಲಿ ಹೂತು ಹೋಗಿದ್ದ ಕೆಂಪು ಗ್ರ್ಯಾನೈಟ್ ಕಲ್ಲಿನ ಮೂರು ಅಡಿ ಅಗಲ ಮತ್ತು ನಾಲ್ಕು ಅಡಿ ಉದ್ದದ ಕ್ರಿ.ಶ. 11ನೇ ಶತಮಾನದ ಹಳೆಗನ್ನಡ ಭಾಷೆ ಹಾಗೂ ಲಿಪಿಯಲ್ಲಿರುವ ಕನ್ನಡ ಶಿಲಾ ಶಾಸನವೊಂದನ್ನು ಈಚೆಗೆ ಶಿಲಾ ಶಾಸನಗಳ ಸಂಶೋಧಕ ಡಾ.ಎಂ.ಎಸ್ ಶಿರವಾಳ ಶೋಧಿಸಿದ್ದಾರೆ.

‘ದೋರನಹಳ್ಳಿಯ ರಾಮೇಶ್ವರ ದೇವರಿಗೆ ಚಿತ್ರ ಭಾನು ಸಂವತ್ಸರದ ವೈಶಾಖ ಬಹುಳದ ಅಮಾವಾಸ್ಯೆಯ ಗ್ರಹಣದಂದು ಅಧಿಕಾರಿ ಸಹೋದರ ರಿಬ್ಬರು ರಾಮೇಶ್ವರ ದೇವಸ್ಥಾನದ ಪಾರುಪತ್ಯಗಾರರಿಗೆ ಕೆಲವೊಂದು ದತ್ತಿಗಳನ್ನು ಶಿವ ಪೂಜೆಯ ಹೆಸರಿನಲ್ಲಿ ಕೊಟ್ಟಿರುವುದನ್ನು ಶಾಶ್ವತಗೊಳಿಸಲು ಈ ಶಿಲಾಶಾಸನವನ್ನು ಹಾಕಿಸಿದ ವಿಷಯವನ್ನು ಈ ಶಾಸನ ತಿಳಿಸುತ್ತದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT