ADVERTISEMENT

ಶಹಾಪುರ: 19 ಗೃಹ ಬಳಕೆ ಅಡುಗೆ ಸಿಲಿಂಡರ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 15:50 IST
Last Updated 4 ಫೆಬ್ರುವರಿ 2025, 15:50 IST
ಶಹಾಪುರ ನಗರದಲ್ಲಿ ಸೋಮವಾರ ಆಹಾರ ಇಲಾಖೆ ಸಿಬ್ಬಂದಿ ವಿವಿಧ ಮಳಿಗೆಯ ಮೇಲೆ ದಾಳಿ ಮಾಡಿ ಗೃಹ ಬಳಕೆಯ ಅಡುಗೆ ಸಿಲಿಂಡರ್ ಜಪ್ತಿಮಾಡಿಕೊಂಡರು
ಶಹಾಪುರ ನಗರದಲ್ಲಿ ಸೋಮವಾರ ಆಹಾರ ಇಲಾಖೆ ಸಿಬ್ಬಂದಿ ವಿವಿಧ ಮಳಿಗೆಯ ಮೇಲೆ ದಾಳಿ ಮಾಡಿ ಗೃಹ ಬಳಕೆಯ ಅಡುಗೆ ಸಿಲಿಂಡರ್ ಜಪ್ತಿಮಾಡಿಕೊಂಡರು   

ಶಹಾಪುರ: ನಗರದ ಹೊಟೇಲ್, ರೆಸ್ಟೊರೆಂಟ್, ಡಾಬಾ, ಖಾನಾವಳಿ ಸೇರಿದಂತೆ 10 ವಿವಿಧ ಮಳಿಗೆಯ ಮೇಲೆ ಆಹಾರ ನಿರೀಕ್ಷಕ ಬಸವರಾಜ ಪತ್ತಾರ ಹಾಗೂ ಆಹಾರ ಶಿರಸ್ತೆದಾರ ಅಪ್ಪಯ್ಯ ಹಿರೇಮಠ ನೇತೃತ್ವದಲ್ಲಿ ಸೋಮವಾರ ದಾಳಿ ಮಾಡಿ 19 ಗೃಹ ಬಳಕೆ ಅಡುಗೆ ಸಿಲಿಂಡರ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕವಾಗಿ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಆಹಾರ ಇಲಾಖೆ ದಾಳಿ ನಡೆಸಿದೆ.

ನಗರದಲ್ಲಿ ವಿವಿಧ ಮಳಿಗೆಯಲ್ಲಿ ರಾಜಾರೋಷವಾಗಿ ಗೃಹ ಬಳಕೆ ಅಡುಗೆ ಸಿಲಿಂಡರ್ ಉಪಯೋಗಿಸುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ ಎಂದು ಸಿಪಿಐ (ಎಂ) ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.