ADVERTISEMENT

ಮಾಧ್ಯಮರತ್ನ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 11:44 IST
Last Updated 2 ಆಗಸ್ಟ್ 2023, 11:44 IST
ಸುರಪುರದ ಪತ್ರಕರ್ತ ಮಹಾದೇವ ಬೊಮ್ಮನಳ್ಳಿ ಅವರಿಗೆ ಬೀಳಗಿಯಲ್ಲಿ ರಾಜ್ಯ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಸುರಪುರದ ಪತ್ರಕರ್ತ ಮಹಾದೇವ ಬೊಮ್ಮನಳ್ಳಿ ಅವರಿಗೆ ಬೀಳಗಿಯಲ್ಲಿ ರಾಜ್ಯ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು    

ಸುರಪುರ: ಭೀಮಾ ತೀರ ಮಾಸ ಪತ್ರಿಕೆಯ ಸಂಪಾದಕ ಮಹಾದೇವ ಬೊಮ್ಮನಳ್ಳಿ ಅವರಿಗೆ ಬಾಗಲಕೋಟೆ ಜಿಲ್ಲೆ ಹಾಗೂ ಬೀಳಗಿ ತಾಲೂಕು ಘಟಕ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಇತ್ತೀಚೆಗೆ ಬೀಳಗಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೀಳಗಿ ಬ್ರಹನ್ಮಠದ ಶಿವಾನಂದ ದೇವರು, ಸಂಘಟನೆಯ ರಾಜ್ಯಾಧ್ಯಕ್ಷ ಎಮ್.ಎ.ಮಾಲಬಾವಡಿ, ಜಿಲ್ಲಾಧ್ಯಕ್ಷ ರಾಜೇಂದ್ರ ದಂಧರಗಿ ಇದ್ದರು. ಮಹಾದೇವ ಬೊಮ್ಮನಹಳ್ಳಿ ಜತೆ ಸತ್ಯಚಕ್ರ ಮಾಸ ಪತ್ರಿಕೆಯ ಸಂಪಾದಕ ಪರಮಾನಂದ ಛಲವಾದಿ ಹಾಗೂ ಜನಾಕ್ರೋಶ ಮಾಸ ಪತ್ರಿಕೆಯ ಸಂಪಾದಕ ಲಕ್ಷ್ಮಮಣ ನಾಯಕ ಅವರಿಗೂ ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT