ADVERTISEMENT

ಬಿಜೆಪಿಯದ್ದು ಅಧಿಕಾರವಲ್ಲ, ಅಭಿವೃದ್ದಿಯ ಮಂತ್ರ; ರಾಜೂಗೌಡ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 5:14 IST
Last Updated 25 ಜನವರಿ 2023, 5:14 IST
ಕಕ್ಕೇರಾ ಪಟ್ಟಣದ ಐದಭಾವಿರದೊಡ್ಡಿಯ ಕಾಂಗ್ರೆಸ್ ಮುಖಂಡರು ಶಾಸಕ ರಾಜೂಗೌಡ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು
ಕಕ್ಕೇರಾ ಪಟ್ಟಣದ ಐದಭಾವಿರದೊಡ್ಡಿಯ ಕಾಂಗ್ರೆಸ್ ಮುಖಂಡರು ಶಾಸಕ ರಾಜೂಗೌಡ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು   

ಕಕ್ಕೇರಾ: ಪಟ್ಟಣದ ಐದಭಾವಿರದೊಡ್ಡಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಂಗಳವಾರ ಶಾಸಕ ರಾಜೂಗೌಡ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಶಾಸಕ ರಾಜೂಗೌಡ, ಬಿಜೆಪಿಗೆ ಕೇವಲ ಅಧಿಕಾರವಲ್ಲ ಅಭಿವೃದ್ದಿಯೇ ಮೂಲ ಮಂತ್ರ. ನೂರಾರು ಜನರು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಬಲ ಬಂದಂತಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಪುರಸಭೆ ಸದಸ್ಯ ಮಲ್ಲು ದಂಡಿನ್ ಮಾತನಾಡಿದರು.

ADVERTISEMENT

ಮುತ್ತಮ್ಮ ಪೂಜಾರಿತಿ, ಗೋಪಾಲಕೃಷ್ಣ ಜಂಪಾರ, ಪರಶುರಾಂ ಪೂಜಾರಿ, ಸಾಮಣ್ಣ, ಬಸಣ್ಣ, ದೊಡ್ಡ ನಂದಪ್ಪ ಜಂಪಾರ, ಜಟ್ಟೆಪ್ಪ, ಸಣ್ಣ ಜಟ್ಟೆಪ್ಪ, ನಂದಪ್ಪ ಜಂಪಾರ, ಅಯ್ಯಪ್ಪ ಶರಣ, ಪರಶುರಾಮ ಬಿ, ಹುಲಗಪ್ಪ, ಹಣಮಂತ್ರಾಯ, ಪರಸಪ್ಪ ಜಂಪಾರ, ರಾಯಗೌಡ, ಬಸವರಾಜ, ಸೋಮನಾಥ, ಮುತ್ತಪ್ಪ, ರಾಮಯ್ಯ, ಅಂಬ್ರಪ್ಪ, ಸೋಮಣ್ಣ, ಸೋಮನಾಥ, ಸೇರಿದಂತೆ ನೂರಾರು ಜನರು ಸೇರ್ಪಡೆಯಾದರು.

ಮುಖಂಡರಾದ ರಾಜೂ ಹವಾಲ್ದಾರ್, ರಮೇಶ ಶಟ್ಟಿ, ಅಯ್ಯಣ್ಣ ನಿಂಗಾಪೂರ, ದಶರಥ ಆರೇಶಂಕರ್, ಮಲ್ಲಣ್ಣ ಗೋಡಿಹಾಳ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.