ಕೊಡೇಕಲ್ಲ (ಹುಣಸಗಿ): ಪರೋಪಕಾರ ಹಾಗೂ ಸಮಾಜ ಸೇವೆಯಲ್ಲಿ ತೊಡಗುವುದರಿಂದ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಸಂಗಪ್ಪ ಶಿವಪೂರ ಹೇಳಿದರು.
ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ (ಪ್ಯಾಟಿ ಗುಡಿ) ಆವರಣದಲ್ಲಿ ಉದ್ಯಮಿ ಸಂಗನಗೌಡ ಚಿಮ್ಮಲಗಿ ಅವರು ತಮ್ಮ ಪುತ್ರನ ಜನ್ಮ ದಿನದ ಪ್ರಯುಕ್ತ ನಿರ್ಗತಿಕರು ಹಾಗೂ ಬಡವರಿಗೆ ವಸ್ತ್ರದಾನ ಮಾಡಿ, ಬಳಿಕ ಮಾತನಾಡಿದರು.
ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಮಾಡುವ ಕಾರ್ಯ ಹೆಚ್ಚು ಜನರಿಗೆ ತಲುಪುತ್ತದೆ. ಚಿಮ್ಮಲಗಿ ಅವರು ಪ್ರತಿ ವರ್ಷ ನಿರ್ಗತಿಕರು, ಸಾಧು-ಸಂತರು, ಬಡ ಕುಟುಂಬಗಳಿಗೆ ಅನ್ನ, ವಸ್ತ್ರ ನೀಡುವ ಮೂಲಕ ಬಡವರಲ್ಲಿಯೇ ದೇವರ ಸ್ವರೂಪ ಕಾಣುತ್ತಿರುವುದು ಮಾದರಿ ಕಾರ್ಯ ಎಂದರು.
ಈ ವೇಳೆ ಬಸಣ್ಣ ಹಳೇಪೂಜಾರಿ, ಉದ್ಯಮಿ ಸಂಗನಗೌಡ ಚಿಮ್ಮಲಗಿ, ಚಿದಂಬರಗೌಡ, ಬಸವ ಪ್ರಭುಗೌಡ, ರಾಚೋಟಿ ಪೊಲೀಸ್ ಪಾಟೀಲ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಡಿಗೇರ, ಬಸವರಾಜ ರಾಜವಾಳ, ವೀರೇಶ ಮೂಕಾರ್ತಿಹಾಳ, ರವಿಶಂಕರ ಅಡ್ಡಿ, ಬಸವರಾಜ ಮಾಸ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.