ADVERTISEMENT

ವಿವಿಧೆಡೆ ಪರಿಸರ ದಿನಾಚರಣೆ

ಮನೆಗಳ ಮುಂದೆ, ಹೊಲಗಳ ಬದುಗಳಲ್ಲಿ ಸಸಿ ನೆಡಲು ಮನವಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 15:44 IST
Last Updated 6 ಜೂನ್ 2020, 15:44 IST
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ವಸತಿ ನಿಲಯಗಳಲ್ಲಿ ಗಿಡ ನೆಡಲಾಯಿತು
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ವಸತಿ ನಿಲಯಗಳಲ್ಲಿ ಗಿಡ ನೆಡಲಾಯಿತು   

ಯಾದಗಿರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಸಸಿನೆಟ್ಟು ದಿನಾಚರಣೆ ಆಚರಿಸಿದರು.

ಸಮಾಜ ಕಲ್ಯಾಣ ಇಲಾಖೆ: ಸಮಾಜ ಕಲ್ಯಾಣ ಇಲಾಖೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ವಸತಿ ನಿಲಯಗಳಲ್ಲಿ ಸಸಿ ನೆಡುವ ಮೂಲಕ ಆಚರಣೆ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್‌.ಚನ್ನಬಸವ, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಕೆ.ಆರ್.ನಾಡಗೌಡ ಕಾಲೇಜು: ನಗರದ ಅಶೋಕ ನಗರದಲ್ಲಿ ಕೆ.ಆರ್.ನಾಡಗೌಡ ಸಾಮಾಜಿಕ ಕಾರ್ಯ ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ ಆಚರಿಸಲಾಯಿತು. ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ADVERTISEMENT

‘ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ನಾಶದಿಂದಲೇ ಪ್ರಕೃತಿ ವಿಕೋಪ ಹೆಚ್ಚಾಗುವುದರ ಜೊತೆಗೆ ಹಲವಾರು ಮಹಾಮಾರಿ ರೋಗಗಳು ಹರಡುತ್ತಿವೆ. ಆದ್ದರಿಂದ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ, ಹೊಲಗಳ ಬದುಗಳಲ್ಲಿ ಸಸಿಗಳನ್ನು ನೆಡಬೇಕು’ ಎಂದು ಸಲಹೆ ನೀಡಿದರು.

ಈ ವೇಳೆ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ನಾಯಕ, ರಾಜಪ್ಪ ಕೊನಿಮನಿ, ಡಾ. ಭೀಮರಾಯ ಲಿಂಗೇರಿ, ಜಗದೀಶ ನೂಲಿನವರ ಮತ್ತು ಉಪನ್ಯಾಸಕರಾದ ಮೋನಪ್ಪ ಗಚ್ಚಿನಮನಿ, ನಾಗರಾಜ ಬೀರನೂರ, ಹಣಮಂತ ವಲ್ಲೆಪುರ, ವೆಂಕಟೇಶ ನಾಯಕ, ವಿಧ್ಯಾರ್ಥಿಗಳಾದ ಮಲ್ಲಪ್ಪ, ನಿಂಗಣ್ಣ ಜಡಿ, ಮಲ್ಲಿಕಾರ್ಜುನ ವರ್ಕನಳ್ಳಿ, ಸಣ್ಣಮೀರ ನಾಯಕ, ಅವಿನಾಶ, ಶಾಂತ, ಮಂಜುಳಾ, ಪೂಜಾ, ಭವಾನಿ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.