ADVERTISEMENT

ಯಾದಗಿರಿ: 25 ಕುಟುಂಬಗಳಿಗೆ ಆಶಾ ನೆರವು

​ಪ್ರಜಾವಾಣಿ ವಾರ್ತೆ
Published 8 ಮೇ 2020, 16:42 IST
Last Updated 8 ಮೇ 2020, 16:42 IST
ಶ್ರೀನಿವಾಸಪುರ ಪಿಎಚ್‌ಸಿ ಆಶಾ ಕಾರ್ಯಕರ್ತೆಯರು ಸಾಮಗ್ರಿ ವಿತರಿಸಿದರು
ಶ್ರೀನಿವಾಸಪುರ ಪಿಎಚ್‌ಸಿ ಆಶಾ ಕಾರ್ಯಕರ್ತೆಯರು ಸಾಮಗ್ರಿ ವಿತರಿಸಿದರು   

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಶ್ರೀನಿವಾಸಪುರ ಪಿಎಚ್‌ಸಿ ಆಶಾ ಕಾರ್ಯಕರ್ತೆಯರು ವಲಸಿಗ ಕಾರ್ಮಿಕರಿಗೆ ಅಗತ್ಯ ಸಾಮಗ್ರಿ ಯಾದಗಿರಿನೀಡುವ ಮೂಲಕ ನೆರವಿಗೆ ಧಾವಿಸಿದ್ದಾರೆ.

ರಂಜಾನ್ ಬೀ ಮತ್ತು ರಸೂಲ್ ಬೀ ಅವರು, ಲಾಕ್‌ಡೌನ್ ಪರಿಣಾಮ ಬೇರೆ ಊರುಗಳಿಂದ ತಮ್ಮ ಸ್ವಗ್ರಾಮಕ್ಕೆ ಬಂದಿದ್ದ 25ಬಡ ಕುಟುಂಬಗಳಿಗೆ ತಮ್ಮ ಸ್ವಂತ ಹಣದಲ್ಲಿ 1 ಕೆ.ಜಿ ಅಕ್ಕಿ, 1 ಕೆ.ಜಿ ತೊಗರಿ ಬೇಳೆ, 1 ಲೀಟರ್‌ ಎಣ್ಣೆ, ಅರಿಶಿಣ ಪ್ಯಾಕೇಟ್, ಮಸಾಲಾ ಪ್ಯಾಕೇಟ್ ಮತ್ತು ಸಕ್ಕರೆ ಸೇರಿದಂತೆ ಇತರ ಆಹಾರ ಸಾಮಗ್ರಿ ಒಳಗೊಂಡ ಕಿಟ್‌ಗಳನ್ನು
ವಿತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT