ADVERTISEMENT

ರಬ್ಬನಹಳ್ಳಿ ತಾಂಡಾ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 4:42 IST
Last Updated 29 ಅಕ್ಟೋಬರ್ 2020, 4:42 IST

ಶಹಾಪುರ: ತಾಲ್ಲೂಕಿನ ರಬ್ಬನಹಳ್ಳಿ ತಾಂಡಾದ ದೇನು ಕೂಬು ರಾಠೋಡ (50) ಮಂಗಳವಾರ ಎಸ್‌ಬಿಸಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬುಧವಾರ ಶವ ಪತ್ತೆಯಾಗಿದೆ.

ಅವರಿಗೆ ನಾಲ್ವರು ಪುತ್ರರು ಮತ್ತು ಪುತ್ರಿ ಇದ್ದಾರೆ. 3 ಎಕರೆ ಜಮೀನು ಹೊಂದಿದ್ದ ಅವರು ಎಸ್‌ಬಿಐ ಶಾಖೆಯಿಂದ ₹1 ಲಕ್ಷ, ವಿಎಸ್ಎಸ್‌ಎನ್ ಬ್ಯಾಂಕಿನಲ್ಲಿ ₹50 ಸಾವಿರ ಹಾಗೂ ₹ 3 ಲಕ್ಷ ಕೈಸಾಲ ಮಾಡಿದ್ದರು. ಈಚೆಗೆ ಸುರಿದ ಭಾರಿ ಮಳೆಯಿಂದ ಬೆಳೆ ನಷ್ಟವಾಗಿ ತೊಂದರೆ ಅನುಭವಿಸಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಗೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.