ADVERTISEMENT

ಬೈಲಾಪುರ: ಸಾಲಭಾದೆಗೆ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 4:15 IST
Last Updated 15 ಏಪ್ರಿಲ್ 2022, 4:15 IST

ಹುಣಸಗಿ: ಬೈಲಾಪುರ ಗ್ರಾಮದಲ್ಲಿ ರೈತನೊಬ್ಬ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬಾಲದಂಡಪ್ಪ ಹಣಮಂತ್ರಾಯ ಬಿರಾದಾರ್(45) ಸಾವನ್ನಪ್ಪಿದವರು. ಬುಧವಾರ ಮಧ್ಯಾಹ್ನ ತಮ್ಮ ಜಮೀನಿಗೆ ತೆರಳಿದ್ದ ಹಣಮಂತ್ರಾಯ, ಕ್ರಿಮಿನಾಶಕ ಸೇವಿಸಿದರು. ಬಳಿಕ ಕುಟುಂಬಸ್ಥರು ಹುಣಸಗಿಯ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಮೃತ ರೈತನಿಗೆ 2 ಎಕರೆ ಜಮೀನು ಇದ್ದು, ಬ್ಯಾಂಕ್‌ ಸೇರಿದಂತೆ ಕೈಗಡ ಸಾಲ ಮಾಡಿದ್ದರು. ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.