
ಪ್ರಜಾವಾಣಿ ವಾರ್ತೆ
ಕೆಂಭಾವಿ: ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಗುಡಿಸಲುಗಳು ಬೆಂಕಿಗಾಹುತಿಯಾದ ಘಟನೆ ಸಮೀಪದ ಮಲ್ಲಾ ಗ್ರಾಮದಲ್ಲಿ ಗುರುವಾರ ನಡೆದಿದೆ.
ಬಿ.ಅರ್ಜುನರೆಡ್ಡಿ, ವೆಂಕಟೇಶರೆಡ್ಡಿ, ರವಿ ವೆಂಕಟೇಶರೆಡ್ಡಿ ಹಾಗೂ ವಾಸು ರೆಡ್ಡಿ ಎಂಬುವರಿಗೆ ಸೇರಿದ ಗುಡಿಸಲುಗಳು ಭಸ್ಮವಾಗಿವೆ. ವೆಂಕಟೇಶರೆಡ್ಡಿ ಎಂಬುವರಿಗೆ ಸೇರಿದ ₹1 ಲಕ್ಷ ರವಿ ಎಂಬುವರಿಗೆ ಸೇರಿದ 40 ಗ್ರಾಂ ಚಿನ್ನ, ₹2 ಲಕ್ಷ ನಗದು ಸೇರಿದಂತೆ ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಕಂದಾಯ ಇಲಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.