ADVERTISEMENT

ಸುರಪುರ: ಪೌರ ಕಾರ್ಮಿಕರಿಗೆ ದಿನಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 13:17 IST
Last Updated 22 ಜೂನ್ 2021, 13:17 IST
ಸುರಪುರದಲ್ಲಿ ಮಂಗಳವಾರ ಶೋಷಿತಪರ ಸಂಘಟನೆಯಿಂದ ಪೌರ ಕಾರ್ಮಿಕರಿಗೆ ದಿನಸಿ, ತರಕಾರಿ ವಿತರಿಸಲಾಯಿತು
ಸುರಪುರದಲ್ಲಿ ಮಂಗಳವಾರ ಶೋಷಿತಪರ ಸಂಘಟನೆಯಿಂದ ಪೌರ ಕಾರ್ಮಿಕರಿಗೆ ದಿನಸಿ, ತರಕಾರಿ ವಿತರಿಸಲಾಯಿತು   

ಸುರಪುರ: ರಂಗಂಪೇಟೆಯ ನಾಗಮ್ಮ ಸಿಂದಗಿ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಶೋಷಿತಪರ ಸಂಘಟನೆಯಿಂದ ಮಂಗಳವಾರ ಪೌರ ಕಾರ್ಮಿಕರಿಗೆ ದಿಸಿ, ತರಕಾರಿ ಮತ್ತು ಬಟ್ಟೆ ವಿತರಿಸಲಾಯಿತು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, 'ಕೆಲವರು ತಮ್ಮ ಹಿರಿಯರ ಪುಣ್ಯತಿಥಿಗೆ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಇದರಿಂದ ಯಾವುದೇ ಲಾಭವಿಲ್ಲ. ಅದೇ ಹಣವನ್ನು ಪೌರ ಕಾರ್ಮಿಕರಿಗೆ, ಬಡವರಿಗೆ ದಿನಸಿ, ತರಕಾರಿ, ಬಟ್ಟೆ ಇತರ ಅಗತ್ಯ ವಸ್ತುಗಳನ್ನು ವಿತರಿಸಿದರೆ ಬಡವರಿಗೆ ಅನುಕೂಲವಾಗುತ್ತದೆ‘ ಎಂದರು.

ಶಿವಲಿಂಗ ಚಲುವಾದಿ ಎಂ. ಪಟೇಲ, ಖಾಜಾ ಅಜ್ಮೀರ, ಶ್ರೀಮಂತ ಚಲುವಾದಿ, ಗೋವಿಂದರಾಜ ಶಹಾಪುರಕರ ಇತರರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.