ADVERTISEMENT

ಟ್ರ್ಯಾಕ್ಟರ್ ತಗುಲಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದರು

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಟ್ರ್ಯಾಕ್ಟರ್ ಚಾಲಕ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 14:55 IST
Last Updated 18 ಡಿಸೆಂಬರ್ 2018, 14:55 IST
ಟ್ಯಾಕ್ಟರ್ ತಗುಲಿದ ಕಾರಣಕ್ಕೆ ಮಂಗಳವಾರ ಯಾದಗಿರಿಯಲ್ಲಿ ಚಾಲಕನನ್ನು ಕೆಲವರು ಥಳಿಸಿದಾಗ ರಸ್ತೆಯಲ್ಲಿ ಜಮಾಯಿಸಿದ್ದ ಜನರ ಗುಂಪನ್ನು ಪೊಲೀಸರು ಚದುರಿಸಿದರು
ಟ್ಯಾಕ್ಟರ್ ತಗುಲಿದ ಕಾರಣಕ್ಕೆ ಮಂಗಳವಾರ ಯಾದಗಿರಿಯಲ್ಲಿ ಚಾಲಕನನ್ನು ಕೆಲವರು ಥಳಿಸಿದಾಗ ರಸ್ತೆಯಲ್ಲಿ ಜಮಾಯಿಸಿದ್ದ ಜನರ ಗುಂಪನ್ನು ಪೊಲೀಸರು ಚದುರಿಸಿದರು   

ಯಾದಗಿರಿ: ನಗರದ ಸುಭಾಷ್‌ ವೃತ್ತ ಸಂಪರ್ಕ ರಸ್ತೆಯಲ್ಲಿ ಟ್ಯಾಕ್ಟರ್‌ ತಳ್ಳುಗಾಡಿಗೆ ತಗಲಿದ ಕ್ಷುಲ್ಲಕ ವಿಚಾರಕ್ಕೆ ತಳ್ಳುಗಾಡಿ ಮಾಲೀಕರು ಸೇರಿಕೊಂಡಿರುವ ಟ್ರ್ಯಾಕ್ಟರ್‌ ಚಾಲಕನಿಗೆ ಮಂಗಳವಾರ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಟ್ಯಾಕ್ಟರ್‌ ತಗುಲಿದ ಮೇಲೆ ಮಾತಿನ ಚಕಮಕಿ ನಡೆದು, ತಳ್ಳುಗಾಡಿಯ ನಾಲ್ವರು ಸೇರಿ ಚಾಲಕ ವಸಂತ ಎಂಬುವರನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದ ನಾಗರಾಳ ಗ್ರಾಮದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ನಗರದಲ್ಲಿ ಒಂದು ಗಂಟೆ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿ ಸುಗಮ ಸಂಚಾರಕ್ಕಾಗಿ ಪ್ರಯಾಣಿಕರು ಪರದಾಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ನಾಲ್ವರ ಮೇಲೆ ದೂರು ದಾಖಲಾಗಿದೆ. ಹಲ್ಲೆ ನಡೆಸಿರುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ನಗರ ಠಾಣೆ ಪಿಎಸ್‌ಐ ಬಾಪುಗೌಡ ಎಸ್. ಪಾಟೀಲ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.