ADVERTISEMENT

ಸ್ಫೂರ್ತಿದಾಯಕ ಮಹಾನಾಯಕ ಡಾ.ಬಿಆರ್.ಅಂಬೇಡ್ಕರ್ ಧಾರಾವಾಹಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 16:50 IST
Last Updated 8 ಸೆಪ್ಟೆಂಬರ್ 2020, 16:50 IST
ಕಕ್ಕೇರಾ ಪಟ್ಟಣದ ಸಮೀಪದ ಹುಣಸಿಹೊಳೆ ಗ್ರಾಮದಲ್ಲಿ ದಲಿತ ಸೇನೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಕಕ್ಕೇರಾ ಪಟ್ಟಣದ ಸಮೀಪದ ಹುಣಸಿಹೊಳೆ ಗ್ರಾಮದಲ್ಲಿ ದಲಿತ ಸೇನೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ಕಕ್ಕೇರಾ: ಪಟ್ಟಣದ ಸಮೀಪದ ಹುಣಸಿಹೊಳೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನವನ್ನು ಆಧರಿಸಿದ ಜೀಕನ್ನಡ ವಾಹಿನಿಯ ಧಾರಾವಾಹಿ ‘ಮಹಾನಾಯಕ ಡಾ.ಬಿಆರ್.ಅಂಬೇಡ್ಕರ್’ ಚಿತ್ರಕ್ಕೆ ದಲಿತ ಸೇನೆ ಗ್ರಾಮ ಘಟಕದಿಂದ ಪೂಜೆ ಸಲ್ಲಿಸಲಾಯಿತು.

ದಲಿತ ಸೇನೆ ಅಧ್ಯಕ್ಷ ನಿಂಗಪ್ಪ ಕಾಂಬ್ಳೆ ಮಾತನಾಡಿ, ಅಂಬೇಡ್ಕರ್ ಅವರು ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಅಖಂಡ ಭಾರತದಲ್ಲಿ ಮರೆಯಲಾಗದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲ. ಧಾರಾವಾಹಿಯು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರವಾಹಿ ಸರ್ವರಿಗೂ ಸ್ಫೂರ್ತಿ ತುಂಬಲಿದೆ. ಅದರಲ್ಲಿಯು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಅವರಂತೆ ಇಂದಿನ ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಬೇಕಾಗಿದೆ ಎಂದರು.

ADVERTISEMENT

ಕೆಲವರು ಧಾರಾವಾಹಿ ನಿಲ್ಲಿಸಲು ಬೆದರಿಕೆ ಹಾಕುತ್ತಿದ್ದಾರೆ. ಇಂಥವರಿಗೆ ಹೆದರದೆ ಧಾರಾವಾಹಿಯನ್ನು ಮುಂದುವರಿಸಬೇಕು.ಜೀಕನ್ನಡಕ್ಕೆ ನಮ್ಮೆಲ್ಲರ ಬೆಂಬಲ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮರಲಿಂಗಪ್ಪ ಕಟ್ಟಿಮನಿ, ಮಾನಪ್ಪ ಕಟ್ಟಿಮನಿ, ಬಸವರಾಜ ಕಾಂಬ್ಳೆ, ಮಾರುತಿ ಹೊಸಮನಿ, ಭೀಮರಾಯ ದೊಡ್ಡಮನಿ, ಪ್ರಕಾಶ ಬಡಿಗೇರ, ಮಾನಪ್ಪ ಕಾಂಬ್ಳೆ, ಗ್ಯಾನಪ್ಪ ಕಾಂಬ್ಳೆ, ಗಂಗಣ್ಣ ಗೌಂಡಿ, ಸೇರಿದಂತೆ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.