ADVERTISEMENT

ಯಕ್ತಾಪುರ: ಕಾರಹುಣ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 12:04 IST
Last Updated 24 ಜೂನ್ 2021, 12:04 IST
ಕೆಂಭಾವಿ ಸಮೀಪದ ಯಕ್ತಾಪುರ ಗ್ರಾಮದಲ್ಲಿ ಗುರುವಾರ ರೈತ ಕಾಂತಪ್ಪ ಕುಂಬಾರ ಅವರು ಎತ್ತುಗಳನ್ನು ಸಿಂಗಾರ ಮಾಡುವ ಮುಲಕ ತಮ್ಮ ಕುಟುಂಬದೊಂದಿಗೆ ಕಾರಹುಣ್ಣಿಮೆ ಆಚರಿಸಿ, ಸಂಭ್ರಮಿಸಿದರು
ಕೆಂಭಾವಿ ಸಮೀಪದ ಯಕ್ತಾಪುರ ಗ್ರಾಮದಲ್ಲಿ ಗುರುವಾರ ರೈತ ಕಾಂತಪ್ಪ ಕುಂಬಾರ ಅವರು ಎತ್ತುಗಳನ್ನು ಸಿಂಗಾರ ಮಾಡುವ ಮುಲಕ ತಮ್ಮ ಕುಟುಂಬದೊಂದಿಗೆ ಕಾರಹುಣ್ಣಿಮೆ ಆಚರಿಸಿ, ಸಂಭ್ರಮಿಸಿದರು   

ಕೆಂಭಾವಿ: ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಗುರುವಾರ ರೈತರು ಎತ್ತುಗಳಿಂದ ಕರಿ ಹರಿಯುವ ಮೂಲಕ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು.

ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ಮುಂಗಾರು ಹಂಗಾಮಿನ ಮೊದಲ ಹಬ್ಬವೆಂದು ರೈತರು ಆಚರಿಸುತ್ತಾರೆ. ಈಗಾಗಲೇ ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಈ ಮಧ್ಯೆ ಕಾರ ಹುಣ್ಣಿಮೆ ಆಚರಣೆಗೆ ಎಲ್ಲ ರೈತರು ವರ್ಷವಿಡೀ ತನ್ನ ಹೆಗಲಿಗೆ ಹೆಗಲಾಗಿ ದುಡಿಯುವ ದನಕರುಗಳಿಗೆ ಸಿಂಗರಿಸಿ, ಪೂಜೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT