ADVERTISEMENT

ಯಾದಗಿರಿ: ಬಿರುಗಾಳಿಗೆ ನೆಲಕ್ಕುರುಳಿದ ನಿಂಬೆ, ಮಾವಿನಕಾಯಿ

​ಪ್ರಜಾವಾಣಿ ವಾರ್ತೆ
Published 2 ಮೇ 2020, 16:20 IST
Last Updated 2 ಮೇ 2020, 16:20 IST
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಶನಿವಾರ ಮಳೆ ಹಾಗೂ ಬಿರುಗಾಳಿಯಿಂದ ನೆಲಕ್ಕುರಳಿದ ಮಾವಿನ ಕಾಯಿ
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಶನಿವಾರ ಮಳೆ ಹಾಗೂ ಬಿರುಗಾಳಿಯಿಂದ ನೆಲಕ್ಕುರಳಿದ ಮಾವಿನ ಕಾಯಿ   

ಶಹಾಪುರ: ತಾಲ್ಲೂಕಿನ ವನದುರ್ಗ ಸುತ್ತಮುತ್ತ ಶನಿವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಕೊಯ್ಲಿಗೆ ಬಂದಿದ್ದ ಮಾವಿನಕಾಯಿ ನೆಲಕ್ಕುರುಳಿವೆ. ಅಲ್ಲದೆ ಜೋರಾಗಿ ಬೀಸಿದ ಗಾಳಿಯಿಂದ ನಿಂಬೆಗಿಡ ಬುಡ ಸಮೇತ ನೆಲಕ್ಕೆ ಬಿದ್ದಿವೆ.

ಬೆಳಿಗ್ಗೆಯಿಂದ ಹೆಚ್ಚಿನ ತಾಪಮಾನವಿತ್ತು. ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ಜೋರಾಗಿ ಗಾಳಿ ಬೀಸುವುದರ ಜೊತೆಗೆ ಸುಮಾರು ಅರ್ಧಗಂಟೆ ಮಳೆ ಸುರಿಯಿತು. ಜಮೀನುಗಳಲ್ಲಿ ರೈತರು ಹಾಕಿದ್ದ ಮಾವಿನ ಗಿಡದಲ್ಲಿ ಹೆಚ್ಚಿನ ಪ್ರಮಾಣದ ಕಾಯಿ ಇದ್ದವು. ಗಾಳಿಯ ರಭಸಕ್ಕೆ ಕಾಯಿ ನೆಲದ ಪಾಲಾಗಿವೆ. ಇದರಿಂದ ಮಾವು ರೈತ ಪಾಲಿಗೆ ಹುಳಿಯಾಗಿದೆ.

ಅಲ್ಲದೆ ನಿಂಬೆ ಹಣ್ಣಿನ ಕಾಯಿ ಉದುರುವುದರ ಜೊತೆಗೆ ಗಿಡವು ಬುಡ ಸಮೇತ ಕಿತ್ತು ಬಿದ್ದಿವೆ ಇದರಿಂದ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.