ADVERTISEMENT

ಯಾದಗಿರಿ ತಲುಪಿದ ‘ಮಾದಿಗ ಚೈತನ್ಯ ರಥಯಾತ್ರೆ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 18:50 IST
Last Updated 23 ಜನವರಿ 2021, 18:50 IST

ಯಾದಗಿರಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ವಿರಾಟ್‌ ಶಕ್ತಿ ಪ್ರದರ್ಶನ ಅಂಗವಾಗಿ ನಡೆಯುತ್ತಿರುವ ಮಾದಿಗ ಚೈತನ್ಯ ರಥಯಾತ್ರೆ ಶನಿವಾರ ಯಾದಗಿರಿ ಜಿಲ್ಲೆ ತಲುಪಿತು.

ರಾಯಚೂರು ಜಿಲ್ಲೆಯ ಜಾಲಹಳ್ಳಿ ಮೂಲಕ ಜಿಲ್ಲೆ ತಲುಪಿದ ರಥಯಾತ್ರೆಗೆ ಸುರಪುರದ ಪ್ರವಾಸಿ ಮಂದಿರದ ಬಳಿ ಸ್ವಾಗತಕೋರಲಾಯಿತು.

‘ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದು ಬಿಜೆಪಿಯವರು ಶಿರಾ ಉಪ ಚುನಾವಣೆ ವೇಳೆ ಹೇಳಿದ್ದರು. ಈಗ ಅದನ್ನು ಮರೆತಿದ್ದು, ಇದು ಜಾರಿಯಾಗುವರೆಗೆ ಹೋರಾಟ ಮಾಡುತ್ತೇವೆ. ಕಾಂಗ್ರೆಸ್‌, ಜೆಡಿಎಸ್‌ನವರು ಮಾದಿಗ ಸಮುದಾಯ ಕಡೆಗಣಿಸಿದ್ದಾರೆ. ಬಿಜೆಪಿಯವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ’ ಎಂದುಸಮುದಾಯದ ಮುಖಂಡರಾದ ಹೆಣ್ಣೂರು ಲಕ್ಷ್ಮಿನಾರಾಯಣ, ನಾಗರಾಜ ಗುತ್ತಳ್ಳಿ, ಸುಬ್ಬಣ್ಣ ಹೊಸಕೋಟೆ ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.