ADVERTISEMENT

ಯಾದಗಿರಿ: 'ರನ್ ಫಾರ್ ಯುನಿಟಿ' ಮ್ಯಾರಥಾನ್‌ 

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 6:01 IST
Last Updated 31 ಅಕ್ಟೋಬರ್ 2019, 6:01 IST
   

ಯಾದಗಿರಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ನಗರದ ಲುಂಬಿನಿ ವನದಿಂದ ಐದು ಕೀ.ಮೀ. ವ್ಯಾಪ್ತಿಯಲ್ಲಿ 'ರನ್ ಫಾರ್ ಯುನಿಟಿ' ಮ್ಯಾರಥಾನ್ ಗುರುವಾರ ನಡೆಯಿತು.

ಮ್ಯಾರಥಾನ್ ಓಟವು ಲುಂಬಿನಿವನದಿಂದ ಆರಂಭಗೊಂಡು ಶಾಸ್ತ್ರಿ ವೃತ್ತ, ಸುಭಾಷ ವೃತ್ತ, ಪದವಿ ಮಹಾವಿದ್ಯಾಲಯ ಕ್ರಾಸ್, ಕನಕ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಲುಂಬಿನಿವನ ತಲುಪಿತು.

‌‌ಈ ವೇಳೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್, ಡಿವೈಎಸ್ಪಿ ಯು.ಶರಣಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.