ADVERTISEMENT

ರೈತರಿಗೆ ಬೇಗ ನೀರು ಹರಿಸಿ; ಶಾಸಕ ಶರಣಬಸಪ್ಪ ದರ್ಶಾನಪುರ

ಜಾಕ್‌ವೆಲ್‌ಗೆ ಶಾಸಕ ಶರಣಬಸಪ್ಪ ದರ್ಶಾನಪುರ ಭೇಟಿ: ಅಧಿಕಾರಿಗಳಿಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 10:43 IST
Last Updated 18 ಅಕ್ಟೋಬರ್ 2021, 10:43 IST
ಕೆಂಭಾವಿ ಪಟ್ಟಣದ ಗುತ್ತಿ ಬಸವೇಶ್ವರ ಏತ ನೀರಾವರಿ ಜಾಕ್‍ವೆಲ್ ಪ್ರದೇಶಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಇಇ ಸಂಜಯ್, ಶಿವಮಾಂತ ಚಂದಾಪುರ, ನಿಂಗನಗೌಡ ಮರಡ್ಡಿ, ಅಮೀನರಡ್ಡಿ ಹೊಸಮನಿ, ಅಯ್ಯಪ್ಪಗೌಡ ವಂದಗನೂರ ಹಾಗೂ ರಂಗಪ್ಪ ವಡ್ಡರ್ ಸೇರಿ ಹಲವರು ಇದ್ದರು
ಕೆಂಭಾವಿ ಪಟ್ಟಣದ ಗುತ್ತಿ ಬಸವೇಶ್ವರ ಏತ ನೀರಾವರಿ ಜಾಕ್‍ವೆಲ್ ಪ್ರದೇಶಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಇಇ ಸಂಜಯ್, ಶಿವಮಾಂತ ಚಂದಾಪುರ, ನಿಂಗನಗೌಡ ಮರಡ್ಡಿ, ಅಮೀನರಡ್ಡಿ ಹೊಸಮನಿ, ಅಯ್ಯಪ್ಪಗೌಡ ವಂದಗನೂರ ಹಾಗೂ ರಂಗಪ್ಪ ವಡ್ಡರ್ ಸೇರಿ ಹಲವರು ಇದ್ದರು   

ಕೆಂಭಾವಿ: ಪಟ್ಟಣದ ಗುತ್ತಿ ಬಸವೇಶ್ವರ ಏತ ನೀರಾವರಿ ಜಾಕ್‍ವೆಲ್ ಪ್ರದೇಶಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಟ್ಟು ಎಂಟು ಮೋಟಾರ್‌ಗಳಲ್ಲಿ ಕೇವಲ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸಮರ್ಪಕವಾಗಿ ನೀರು ಪೂರೈಕೆಯಾಗದೆ ಪರದಾಡುವಂತಾಗಿದೆ ಎಂದು ರೈತರು ಶಾಸಕರಿಗೆ ದೂರು ನೀಡಿದ್ದರು. ಆದ್ದರಿಂದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಸದ್ಯ ರೈತರಿಗೆ ನೀರಿನ ಅಗತ್ಯ ಇದೆ. ಇಂಥ ಸಂದರ್ಭದಲ್ಲಿ ದುರಸ್ತಿ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೆಶಕರು ಹಾಗೂ ಮುಖ್ಯ ಎಂಜಿನಿಯರ್‌ ಜತೆ ಮಾತನಾಡಿದ್ದೇನೆ. ಎರಡು ಮೋಟಾರ್‌ಗಳ ಸಂಪೂರ್ಣ ದುರಸ್ತಿಗೆ ₹10 ಕೋಟಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ. ಉಳಿದ ಮೋಟಾರ್‌ಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಅದನ್ನು ಬೇಗ ಮುಗಿಸಿ 4 ಮೋಟಾರ್‌ಗಳ ಮೂಲಕ ಕಾಲುವೆಗೆ ನೀರು ಹರಿಸಲಾಗುವುದು ಎಂದು ಹೇಳಿದ್ದಾರೆ’ ಎಂದು ಹೇಳಿದರು.

ADVERTISEMENT

ನೀರನ್ನು ಮಿತವಾಗಿ ಬಳಸಿ ಕೆಳ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.