ADVERTISEMENT

ಚಾಮನಾಳ: ಹೊಲದಲ್ಲಿ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 3:53 IST
Last Updated 31 ಮೇ 2022, 3:53 IST
ಸಚಿನ್ ದೇವಿಂದ್ರಪ್ಪ
ಸಚಿನ್ ದೇವಿಂದ್ರಪ್ಪ   

ಶಹಾಪುರ: ತಾಲ್ಲೂಕಿನ ಚಾಮನಾಳ ಗ್ರಾಮದ ಹೊಲದಲ್ಲಿ ಯುವಕನ ಕೊಲೆ ಮಾಡಿದ ಘಟನೆ ನಡೆದಿದೆ.

ದಂಡಸೋಲಾಪುರ ಗ್ರಾಮದ ಸಚಿನ್ ದೇವಿಂದ್ರಪ್ಪ ಮರ್ಕುಂದ(28) ಕೊಲೆಯಾದವ. ಪಂಚರ್ ಅಂಗಡಿ ಇರಿಸಿಕೊಂಡಿದ್ದು, ಚಾಮನಾಳ ಗ್ರಾಮದ ಪಾದ್ರಿ ಹೊಲದಲ್ಲಿ ಕೊಲೆಯಾದ ರೀತಿಯಲ್ಲಿ ಶವ ಪತ್ತೆಯಾಗಿದೆ. ಕೊಲೆಗೆ ಕಾರಣ ತಿಳಿದಿಲ್ಲ ಎಂದು ಜಿಲ್ಲಾ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಎಸ್ಪಿ, ಸಿಪಿಐ ಚೆನ್ನಯ್ಯ ಹಿರೇಮಠ, ಪಿಎಸ್ಐ ಅಯ್ಯಪ್ಪ ಭೇಟಿ ನೀಡಿ ಪರಿಶೀಲಿಸಿದರು. ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಎರಡು ದಿನದ ಹಿಂದೆಯಷ್ಟೇ ಪಿಎಸ್ಐ ಹಾಗೂ ಕಾನ್‌ಸ್ಟೆಬಲ್‌ ನಡುವೆ ಆಡಿಯೊ ಸಂಭಾಷಣೆ ವೈರಲ್ ಆಗಿ, ಗೋಗಿ ಠಾಣೆಯು ಚರ್ಚೆಗೆ ಗ್ರಾಸವಾಗಿತ್ತು. ಈ ಕೊಲೆ ಜನರಲ್ಲಿ ಆತಂಕ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.