ADVERTISEMENT

ನಾಯ್ಕಲ್‍: ಟ್ರ್ಯಾಕ್ಟರ್ ಸಮೇತ ಹತ್ತಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 15:54 IST
Last Updated 29 ನವೆಂಬರ್ 2019, 15:54 IST

ಯಾದಗಿರಿ: ಸಮೀಪದ ನಾಯ್ಕಲ್ ಗ್ರಾಮದ ರೈತ ಯೂಸೂಫ್ ಸಾಬ್ ಮೈಹಿಬೂಬ್‌ಸಾಬ್ ಎಂಬುವವರ ಹತ್ತಿ ತುಂಬಿದ ಟ್ರ್ಯಾಕ್ಟರ್ ಸಮೇತ ಹತ್ತಿ ಕಳ್ಳತನ ಮಾಡಿದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

ಜಮೀನಿನಲ್ಲಿ ಬಿಡಿಸಿದ ಸುಮಾರು 40 ಕ್ವಿಂಟಲ್‍ನಷ್ಟು ₹ 2.50 ಲಕ್ಷ ಮೌಲ್ಯದ ಹತ್ತಿ ಹಾಗೂ ₹ 5 ಲಕ್ಷ ಮೌಲ್ಯದ ಟ್ರ್ಯಾಕ್ಟರ್‌ ಕಳ್ಳತನವಾಗಿದೆ.

ರೈತ ಯೂಸೂಫ್‍ಸಾಬ್ ಅವರು ಹತ್ತಿ ಬಿಡಿಸಿ ಟ್ರ್ಯಾಕ್ಟರ್‌ನಲ್ಲಿ ತುಂಬಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಹತ್ತಿ ಮಿಲ್‌ಗೆ ಹೋಗಿ ಮಾರಾಟ ಮಾಡುವವರಿದ್ದರು. ಆದರೆ, ಕಳ್ಳರು ಟ್ಯಾಕ್ಟರ್ ಸಮೇತ ಹತ್ತಿ ಕಳುವು ಮಾಡಿದ್ದಾರೆ. ಇದರಿಂದ ರೈತ ಯೂಸೂಫ್‍ಸಾಬ್ ಕಂಗಲಾಗಿದ್ದಾರೆ.ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.