ADVERTISEMENT

ಈಡಿಗ ಸಮುದಾಯ ಭವನ ನಿರ್ಮಿಸಿ: ಡಾ. ಪ್ರಣವಾನಂದ ಸ್ವಾಮೀಜಿ

ಶಹಾಪುರ: ನಾರಾಯಣ ಗುರುಗಳ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:10 IST
Last Updated 16 ಸೆಪ್ಟೆಂಬರ್ 2022, 4:10 IST
ಶಹಾಪುರದಲ್ಲಿ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ಮಾತನಾಡಿದರು
ಶಹಾಪುರದಲ್ಲಿ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ಮಾತನಾಡಿದರು   

ಶಹಾಪುರ: ‘ನಾರಾಯಣ ಗುರುಗಳ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈಡಿಗ ಸಮಾಜಕ್ಕೆ ಸಮುದಾಯ ಭವನ ಅಗತ್ಯವಾಗಿದೆ. ಶಾಸಕ ಶರಣಬಸಪ್ಪ ದರ್ಶನಾಪುರ ಇದರ ಬಗ್ಗೆ ಗಮನಹರಿಸಬೇಕು’ ಎಂದು ಚಿತ್ತಪುರದ ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಗರದ ಚರಬಸವೇಶ್ವರ ಗದ್ದುಗೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ಮಾತನಾಡಿದರು.

ADVERTISEMENT

ಚರಬಸವೇಶ್ವರ ಸಂಸ್ಥಾನದ ವೇದಮೂರ್ತಿ ಬಸವಯ್ಯ ಶರಣರು, ಶರಣಪ್ಪ ಸಲಾದಪುರ, ಉಪನ್ಯಾಸಕಿ ಹಣಮಂತಿ ಗುತ್ತೇದಾರ, ಚಂದ್ರಶೇಖರ ಮಾಗನೂರ, ಡಾ.ಚಂದ್ರಶೇಖರ ಸುಬೇದಾರ, ಚಂದ್ರಶೇಖರ ಆರಬೋಳ, ಹನುಮೇಗೌಡ ಬಿರನಕಲ್, ಸಣ್ಣ ನಿಂಗಣ್ಣ ನಾಯ್ಕೋಡಿ, ರಮೇಶ ಗುತ್ತೇದಾರ, ಸಂತೋಷ ಗುತ್ತೇದಾರ, ನಾಗರಾಜಗೌಡ ಕಟ್ಟಿಮನಿ, ಭಿಮಯ್ಯಗೌಡ ಕಟ್ಟಿಮನಿ, ಮಲ್ಲಯ್ಯ ಗುತ್ತೇದಾರ, ಹುಸನಯ್ಯ ಗುತ್ತೇದಾರ, ರಾಜೇಶ ಗುತ್ತೇದಾರ, ಗಿರಿಯಪ್ಪಗೌಡ ದೊಡ್ಡ ಸಗರ, ಸಂಜೀವಪ್ಪ ರಸ್ತಾಪುರ, ಉಮೇಶ ಕಟ್ಟಿಮನಿ, ರಾಧಾಕೃಷ್ಣ, ಬಸಯ್ಯ ಗುತ್ತೇದಾರ, ಯಲ್ಲಯ್ಯ, ಚಂದ್ರಶೇಖರ, ಬಾಲಯ್ಯಗೌಡ, ರಾಜೇಂದ್ರ ಗುತ್ತೆದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.