ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಸಾಧಾರಣ ಮಳೆ

ಹೆಸರು ಬೆಳೆಗೆ ಆಸರೆಯಾದ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 17:09 IST
Last Updated 16 ಜೂನ್ 2020, 17:09 IST
ಯಾದಗಿರಿಯ ಲಕ್ಷ್ಮಿ ನಗರದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯಿತು
ಯಾದಗಿರಿಯ ಲಕ್ಷ್ಮಿ ನಗರದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯಿತು   

ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು.ನಗರದಲ್ಲಿ ಸಂಜೆ ವೇಳೆ ಸಾಧಾರಣ ಸುರಿಯಿತು. ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ.

ವಡಗೇರಾತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ.ಹುಣಸಗಿಯಲ್ಲಿ15 ನಿಮಿಷ ಸಾಧಾರಣ ಮಳೆಯಾಗಿದೆ.ಯರಗೋಳಗ್ರಾಮದಲ್ಲಿ ಬೆಳಿಗ್ಗೆಯಿಂದಲೂಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ ತುಂತುರು ಮಳೆ ಸುರಿದಿದೆ. ಕೆಂಭಾವಿ, ಕಕ್ಕೇರಾದಲ್ಲಿಯೂ ಸಾಧಾರಣ ಮಳೆಯಾಗಿದೆ.

ಸುರಪುರದಲ್ಲಿಮಧ್ಯಾಹ್ನ ಮಳೆ ಸಾಧಾರಣ ಮಳೆಯಾಗಿದ್ದು,ಗುರುಮಠಕಲ್‌ನಲ್ಲಿ ಅಲ್ಪ ಮಳೆ ಸುರಿದಿದೆ.ಸೈದಾಪುರದಲ್ಲಿ ತುಂತುರು ಮಳೆಯಾಗಿದೆ. ಶಹಾಪುರದಲ್ಲಿ ಬೆಳಿಗ್ಗೆ ತುಂತುರು ಮಳೆಯಾಗಿದೆ.

ADVERTISEMENT

ಗ್ರಾ.ಪಂ. ವಾರು ಮಾಹಿತಿ: ಶಿರವಾಳ 4 ಮಿ.ಮೀ, ಮೂಡಬೂಳ 2, ಠಾಣಗುಂಡಿ 2, ಅರಕೇರಾ (ಬಿ) 4, ಗಾಜರಕೋಟ 10, ಹೋತಪೇಟ 4, ಕಂದಕೂರ 2, ಚಪೇಟ್ಲಾ 8, ಕಾಕಲವಾರ 8, ಚಂಡರಕಿ 12, ಇಬ್ರಾಹಿಂಪುರ 14, ಆಣಬಿ 1, ಮದ್ರಕಿ 6, ಉಕ್ಕಿನಾಳ 7, ಮಲ್ಲಾ (ಬಿ) 2, ಹುರಸಗುಂಡಗಿ 10 ಮಿ.ಮೀ ಮಳೆಯಾಗಿದೆ.

ಕಳೆದ ವಾರದ ಹಿಂದೆ ಬಿತ್ತಿದ ಹೆಸರು ಬೆಳೆಗೆಮಳೆ ಅವಶ್ಯವಿತ್ತು. ಈಗ ಅಲ್ಲಲ್ಲಿ ತುಂತುರು ಮಳೆಯಾಗಿದ್ದು, ಮೊಳಕೆ ಬರಲು ಆಸರೆಯಾದಂತೆ ಆಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಆರಂಭವಾಗಿದ್ದು,ಉದ್ದು, ಹತ್ತಿ ಬಿತ್ತನೆಗೆ ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.