ADVERTISEMENT

ಸಾಮಾಜಿಕ ಬದುಕಿನ ಬಗ್ಗೆ ಅರಿವು ಮೂಡಿಸುವ ಎನ್‌ಎಸ್‌ಎಸ್: ಶಿಕ್ಷಕ ಭೀಮರಾಯ ಚಟ್ನಳ್ಳಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 14:44 IST
Last Updated 28 ನವೆಂಬರ್ 2021, 14:44 IST
ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಹ ಶಿಕ್ಷಕ ಭೀಮರಾಯ ಚಟ್ನಳ್ಳಿ ಮಾತನಾಡಿದರು. ಸಂಜುಕುಮಾರನಾಯಕ, ಭೈರಣ್ಣ ಅಂಬಿಗೇರ ಇದ್ದರು
ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಹ ಶಿಕ್ಷಕ ಭೀಮರಾಯ ಚಟ್ನಳ್ಳಿ ಮಾತನಾಡಿದರು. ಸಂಜುಕುಮಾರನಾಯಕ, ಭೈರಣ್ಣ ಅಂಬಿಗೇರ ಇದ್ದರು   

ತಿಂಥಣಿ (ಸುರಪುರ): ‘ರಾಷ್ಟೀಯ ಸೇವಾ ಯೋಜನೆಯು ಪ್ರತಿಯೊಬ್ಬ ಶಿಬಿರಾರ್ಥಿಗೆ ಸಾಮಾಜಿಕ ಬದುಕಿನ ಬಗ್ಗೆ ಅರಿವನ್ನು ಮೂಡಿಸುತ್ತದೆ. ಎಲ್ಲರೂ ಕೇವಲ ಪದವೀಧರರಾಗಿ ಹೊರಬರುವುದಕ್ಕಿಂತ ಅರಿವುದಾರರಾಗಿ ಹೊರಬರುವಂತೆ ಮಾಡುತ್ತದೆ’ ಎಂದು ತಿಂಥಣಿಯ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಭೀಮರಾಯ ಚಟ್ನಳ್ಳಿ ಹೇಳಿದರು.

ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಸಂಜುಕುಮಾರ ನಾಯಕ ಮಾತನಾಡಿ, ‘ಇಂದಿನ ಯುವ ಪೀಳಿಗೆ ದೇಶಕ್ಕೆ ಮಾರಕವಾಗದೆ ದೇಶದ ಭದ್ರ ಬುನಾದಿಗೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಅವಶ್ಯಕತೆ ಇದೆ. ಇದರ ಆಶಯವನ್ನು ರಾಷ್ಟ್ರೀಯ ಸೇವಾ ಯೋಜನೆ ಸಾಕಾರಗೊಳಿಸುತ್ತದೆ’ ಎಂದು ತಿಳಿಸಿದರು.

ADVERTISEMENT

ಗ್ರಾಮ ಪಂಚಾಯತ ಸದಸ್ಯ ಬೈರಣ್ಣ ಅಂಬಿಗೇರ, ಡಾ. ಮಲ್ಲಿಕಾರ್ಜುನ ಕಮತಗಿ, ಕಾರ್ಯಕ್ರಮ ಅಧಿಕಾರಿ ಡಾ. ಆದಿಶೇಷ ನೀಲಗಾರ, ಬೀರೇಶ ಕೊಡೇಸೂರ ಇದ್ದರು. ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಸುವರ್ಣ ಅಂಟೋಳಿ, ವೆಂಕಟೇಶ ಜಾಲಗಾರ, ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ಚಂದ್ರಶೇಖರ ನಾಯಕ, ನಬಿಸಾಬ್, ಮರೆಮ್ಮ ಕಟ್ಟಿಮನಿ, ಶ್ರೀದೇವಿ ನಾಯಕ, ಶೃತಿ, ಹುಲಗಮ್ಮ ಭಾಗವಹಿಸಿದ್ದರು.

ಶ್ರೀದೇವಿ ಮತ್ತು ಸೈಜಾದಬಿ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಸುಪ್ರಿಯಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.