ADVERTISEMENT

ಪಾದಯಾತ್ರೆಯಲ್ಲಿ ಜಾತ್ರೆಗೆ ತೆರಳಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 7:42 IST
Last Updated 21 ನವೆಂಬರ್ 2022, 7:42 IST
ನಾರಾಯಣಪುರದ ಭಕ್ತರು ಪಾದಯಾತ್ರೆ ಮೂಲಕ ವಿಜಯಪುರ ಜಿಲ್ಲೆಯ ಅರಕೇರಾ ಅಮೋಘ ಸಿದ್ದೇಶ್ವರ ಜಾತ್ರೆಗೆ ‌ತೆರಳಿದರು
ನಾರಾಯಣಪುರದ ಭಕ್ತರು ಪಾದಯಾತ್ರೆ ಮೂಲಕ ವಿಜಯಪುರ ಜಿಲ್ಲೆಯ ಅರಕೇರಾ ಅಮೋಘ ಸಿದ್ದೇಶ್ವರ ಜಾತ್ರೆಗೆ ‌ತೆರಳಿದರು   

ನಾರಾಯಣಪುರ: ವಿಜಯಪುರ ಜಿಲ್ಲೆಯ ಅರಕೇರಾ ಗ್ರಾಮದಲ್ಲಿ ನಡೆಲಿರುವ ಅಮೋಘ ಸಿದ್ದೇಶ್ವರರ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಲು, ಸ್ಥಳೀಯ ಅಮೋಘ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದ 11 ಜನ ಯುವಕರು ಶನಿವಾರದಿಂದ ಪಾದಯಾತ್ರೆಯನ್ನು ಆರಂಭಿಸಿದರು.

ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ನ.23 ರಂದು ಜರಗುವ ಅಮೋಘ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ ಸೇರಿದಂತೆ ಭಂಡಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪಾದಯಾತ್ರಿ ಸಿದ್ದು ಕಮಲಾಪುರ ಮಾತನಾಡಿ ಕಳೆದ 9 ವರ್ಷಗಳಿಂದ ಪಾದಯಾತ್ರೆಯ ಮೂಲಕ ಅರಕೇರಾ ಜಾತ್ರೆಗೆ ತೆರಳಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಆಂಜನೇಯ ದೊರೆ, ರಮೇಶ ಕೋಳುರ, ಸಿದ್ದು ನಾಗರಬೆಟ್ಟ, ದ್ಯಾಮಣ್ಣ, ಗದೆಪ್ಪ ಕಂಬಳಿ. ಮಲ್ಲು ತಪ್ಪಲಕಟ್ಟಿ, ಕಾಶೀನಾಥ ಹೂಗಾರ, ಪರಶುರಾಮ್ ಹಗರಟಗಿ, ಅವಿನಾಶ ದೊಡಮನಿ, ಮೌನೇಶ ಹಳ್ಳೆರ, ಮುತ್ತಪ್ಪ ಕಂಬಳಿ, ಬಸವರಾಜ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.