ಸುರಪುರ: ತಹಶೀಲ್ದಾರ್ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ‘ಕೇಂದ್ರ ಸರ್ಕಾರ ಇಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇವಲ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಮುಖಂಡರ ವಿರುದ್ಧ ಕಿರುಕುಳ ನೀಡುತ್ತಿದೆ’ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಮುಖಂಡ ಅಹ್ಮದ್ ಪಠಾಣ ಮಾತನಾಡಿದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಿದರು.
ವಿಠ್ಠಲ ಯಾದವ, ರಾಜಾ ಸಂತೋಷ ನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ ನಾಯಕ, ಭಂಡಾರೆಪ್ಪ ನಾಟೇಕಾರ, ಅಬ್ದುಲ್ಗಫಾರ ನಗನೂರಿ, ಮಲ್ಲು ಐಕೂರ, ಚಂದ್ರಕಾಂತ ದನಕಾಯಿ, ಜುಮ್ಮಣ್ಣ ಕೆಂಗುರಿ, ರಮೇಶ ದೊರೆ, ಭೀಮಣ್ಣ ಕುಂಬಾರ, ಮಲ್ಲು ಹುಬ್ಬಳ್ಳಿ, ವೆಂಕಟೇಶ, ಬೇಟೆಗಾರ, ಭೀಮರಾಯ ಮೂಲಿಮನಿ, ರವಿ ಸಾಹು, ಪ್ರವೀಣ ನಾಯಕ, ಮನೋಹರ ಕುಂಟೋಜಿ, ಕಾಳಪ್ಪ ಕವಾತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.