ಕಕ್ಕೇರಾ: ಪಟ್ಟಣದ ಸಮೀಪದ ಪೂಲಭಾವಿರದೊಡ್ಡಿಯಲ್ಲಿ ಶನಿವಾರ ಬನದೊಡ್ಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಬನದೊಡ್ಡಿ ಸಿಆರ್ಪಿ ಸುಭಾಸ್ ಒಂಟಿ, ಕ್ಲಸ್ಟರ್ ಒಟ್ಟು 12 ಶಾಲೆಗಳಿದ್ದು, ಅದರಲ್ಲಿ 9 ಶಾಲೆಗಳಿಗೆ ಬಣ್ಣ ಹಚ್ಚಲಾಗಿದೆ. ಪಠ್ಯದ ಜತೆಗೆ ಸಾಂಸ್ಕ್ರತಿಕ ಚಟುವಟಿಕೆಗಳಿಗೂ ಪ್ರೋತ್ಸಾಗ ಕೊಡಲು ಪ್ರತಿಭಾ ಕಾರಂಜಿ ಅವಶ್ಯ ಎಂದು ಹೇಳಿದರು.
ಪೂಜ್ಯ ಭೀಮಣ್ಣ ಮತ್ಯಾ, ಸಾಮಣ್ಣ ಪೂಲಭಾವಿ, ಅಮರೇಶ ದೊರೆ, ನಂದಪ್ಪ ಜಂಪಾರದೊಡ್ಡಿ, ಭೂದಾನಿ ಬಾಲಪ್ಪ, ಲಕ್ಷ್ಮಣ, ಅಯ್ಯಪ್ಪ, ಧನಸಿಂಗ್ ರಾಠೋಡ, ಸಂಗಪ್ಪ ವಿಶ್ವಕರ್ಮ, ನಿರೂಪಾದಿ, ಅಮರೇಶ ಭೂತ, ಗುರುಮೂತರ್ಿ ಡಿ, ರೇವಣಸಿದ್ದಪ್ಪ, ಶರಣಪ್ಪ ತೊಣಶ್ಯಾಳ, ಬಸಪ್ಪ ಅಬ್ಯಾಳ, ಮೈನೂದ್ದೀನ್, ಶರಣಬಸಪ್ಪ ಪಾಟೀಲ್, ತೋಟಪ್ಪ, ಶಿವಾನಂದ, ಬಸವನಗೌಡ, ಮಂಜುನಾಥ, ನಂದಪ್ಪ, ಅಮರೇಶ ಹಡಪದ ಇದ್ದರು.
ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.