ADVERTISEMENT

ಜಿಲ್ಲೆಯಾದ್ಯಂತ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 5:58 IST
Last Updated 20 ಏಪ್ರಿಲ್ 2024, 5:58 IST
   

ಯಾದಗಿರಿ: ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಗಿನ ಜಾವ ತುಂತುರು ಮಳೆಯಾಗಿದ್ದು, ಈಗ ಮೋಡ ಕವಿದ ವಾತಾವರಣ ಇದೆ.

ನಗರದಲ್ಲಿ ಬೆಳಿಗ್ಗೆ 7 ಗಂಟೆಗೆ ಶುರುವಾರ ಮಳೆ 10 ನಿಮಿಷ ಮಳೆ ಸುರಿಯಿತು. ಅಲ್ಲಲ್ಲಿ ನೀರು ನಿಂತು ತಂಪಿನ ವಾತಾವರಣ ನಿರ್ಮಾಣವಾಯಿತು.

ವಡಗೇರಾದಲ್ಲಿ ಬೆಳಗಿನ ಜಾವ ಸ್ವಲ್ಪ ಮಳೆಯಾಗಿದೆ. ಈಗ ಮೋಡ ಕವಿದ ವಾತಾವರಣ ಇದೆ.

ADVERTISEMENT

ಹುಣಸಗಿ, ಶಹಾಪುರ, ಸುರಪುರ, ನಾರಾಯಣಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇದೆ.

ವಿದ್ಯುತ್ ವ್ಯತ್ಯಯ: ಬೆಳಗಿನ ಜಾವ ಮಳೆಯಾದ ಕಾರಣ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.