ADVERTISEMENT

ಶಹಾಪುರ | ಇಳೆಗೆ ತಂಪೆರೆದ ಮಳೆ: ಜನರಿಗೆ ಸಿಡಿಲಿನ ಭೀತಿ

​ಪ್ರಜಾವಾಣಿ ವಾರ್ತೆ
Published 13 ಮೇ 2024, 15:53 IST
Last Updated 13 ಮೇ 2024, 15:53 IST
13ಎಸ್ಎಚ್ಪಿ 3: ಶಹಾಪುರ ನಗರದಲ್ಲಿ ಸೋಮವಾರ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿದೆ
13ಎಸ್ಎಚ್ಪಿ 3: ಶಹಾಪುರ ನಗರದಲ್ಲಿ ಸೋಮವಾರ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿದೆ   

ಶಹಾಪುರ: ಬಿರು ಬಿಸಿಲಿನಿಂದ ಕಂಗೆಟ್ಟ ಜನರಿಗೆ ಸೋಮವಾರ ಸುರಿದ ಮಳೆಯು ತಂಪೆರೆಯಿತು. ಅದರ ಬೆನ್ನಲ್ಲೇ ಜೋರಾದ ಗಾಳಿ ಹಾಗೂ ಸಿಡಿಲಿನ ಹೊಡೆತವು ಜನರಲ್ಲಿ ಆತಂಕ ಉಂಟು ಮಾಡಿತು.

ಬೆಳಗಿನ ಜಾವ ಸುಮಾರು ಒಂದು ಗಂಟೆ ಕಾಲ ಜೋರಾದ ಗಾಳಿ, ಸಿಡಿಲಿನ ಸಪ್ಪಳದೊಂದಿಗೆ ಮಳೆರಾಯ ಬಂದು ಕಾದ ಕಬ್ಬಿಣದಂತಾಗಿರುವ ಭೂಮಿಯನ್ನು ತಂಪಾಗಿಸಿದ. ಐದಾರು ದಿನದಿಂದ 45 ಡಿಗ್ರಿ ಉಷ್ಣಾಂಶವಿದ್ದ ಪ್ರದೇಶ ಈಗ 39 ಡಿಗ್ರಿಗೆ ಇಳಿದಿದೆ. ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ ಎಂದು ರೈತ ದ್ಯಾವಪ್ಪ ಹೇಳಿದರು.

ಆದರೆ ಅಕಾಲಿಕ ಮಳೆಯು ಮಾವು ಬೆಳೆ ನಷ್ಟ ಅನುಭವಿಸುವಂತೆ ಆಗಿದೆ. ಜೋರಾದ ಗಾಳಿಯ ಹೊಡೆತಕ್ಕೆ ಮಾವಿನ ಕಾಯಿ ನೆಲಕ್ಕೆ ಅಪ್ಪಳಿಸುತ್ತಲಿವೆ. ಇದು ಮಾವು ಬೆಳೆಗಾರರು ನಷ್ಟ ಅನುಭವಿಸುವಂತೆ ಆಗಿದೆ. ಅಲ್ಲದೆ ಏಕಾಏಕಿ ಎರಗುವ ಸಿಡಿಲಿನ ಹೊಡೆತಕ್ಕೆ ರೈತರು ಆತಂಕ ಎದುರಿಸುವಂತೆ ಆಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.