ADVERTISEMENT

ರಾಜುಗೌಡರಗೆ ಸಚಿವ ಸ್ಥಾನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 12:54 IST
Last Updated 31 ಜುಲೈ 2021, 12:54 IST
ಚಿತ್ರಶೀರ್ಷಿಕೆ:28ಎಸ್‍ಡಿಪಿಆರ್1: ಸೈದಾಪುರ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯದವರು ರಾಜುಗೌಡರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಚಿತ್ರಶೀರ್ಷಿಕೆ:28ಎಸ್‍ಡಿಪಿಆರ್1: ಸೈದಾಪುರ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯದವರು ರಾಜುಗೌಡರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.   

ಸೈದಾಪುರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನರಸಿಂಹ ನಾಯಕ(ರಾಜುಗೌಡ)ಅವರಿಗೆ ಸಚಿವ ಸ್ಥಾನ ನೀಡಿ ಎಂದು ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಆಂಜನೇಯ ಮೇಸ್ತ್ರಿ ಮಲ್ಹಾರ ಹೇಳಿದರು.

ಈಚೆಗೆ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜುಗೌಡ ಮೂರು ಬಾರಿ ಶಾಸಕರಾಗಿದ್ದಾರೆ. ಜಗದೀಶ ಶೆಟ್ಟರ್ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ನಮ್ಮ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ಅನುಭವ ರಾಜುಗೌಡ ಅವರಿಗಿದ್ದು ಸಚಿವ ಸ್ಥಾನ ನೀಡುವುದರಿಂದ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಗೊಳಿಸುತ್ತಾರೆ. ರಾಜುಗೌಡರನ್ನ ಸಚಿವ ಸಂಪುಟದಿಂದ ಹೊರಗಿಡುವುದರಿಂದ ಪಕ್ಷ ನಿಷ್ಠಾವಂತರನ್ನ ಕಡೆಗಣಿಸಿದಂತಾಗುತ್ತದೆ. ಹೀಗಾಗಿ ಶಾಸಕರಿಗೆ ಮಂತ್ರಿಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ADVERTISEMENT

‌ರಾಜು ದೊರೆ, ಬಸವರಾಜ ನಾಯಕ ಸೈದಾಪುರ, ಅಮರೇಶ ನಾಯಕ, ಮಲ್ಲೇಶ ನಾಯಕ ಕೂಡಲೂರು, ನಂದಗೋಪಾಲ, ಹಣಮಂತ್ರಾಯ ನಾಯಕ ಇಂದಿರಾನಗರ, ರೆಡ್ಡಿ ನಾಯಕ ನೀಲಹಳ್ಳಿ, ಮಲ್ಲಪ್ಪ, ಮರೆಪ್ಪ ಕೂಡಲೂರು, ರೆಡ್ಡಿ ನಾಯಕ, ವಿಜಯ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.